Uncategorizedಕ್ರೈಂರಾಜ್ಯವೈರಲ್ ನ್ಯೂಸ್

ಶೀಲ ಶಂಕಿಸಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ..! ಆರೋಪಿ ಪೊಲೀಸ್ ವಶಕ್ಕೆ

ನ್ಯೂಸ್ ನಾಟೌಟ್: ಶೀಲ ಶಂಕಿಸಿ ಪತ್ನಿಯನ್ನು ಪತಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಆನೇಕಲ್ ಹೆಬ್ಬಗೋಡಿ ರಾಮಯ್ಯ ಬಡಾವಣೆಯಲ್ಲಿ ಇಂದು(ಫೆ.5) ಬೆಳಗ್ಗೆ ನಡೆದಿದೆ.

ತಿರುಪಾಳ್ಯ ಮೂಲದ ಗಂಗಾ(27) ಕೊಲೆಯಾದ ಗೃಹಿಣಿ ಎಂದು ಗುರುತಿಸಲಾಗಿದೆ. ಪತ್ನಿಯ ಶೀಲ ಶಂಕಿಸಿ ಮೋಹನ್ ರಾಜ್ ಪ್ರತಿನಿತ್ಯ ಮನೆಯಲ್ಲಿ ಜಗಳ ಮಾಡುತ್ತಿದ್ದನೆನ್ನಲಾಗಿದೆ. ಅದೇ ರೀತಿ ಇಂದು ಬೆಳಗ್ಗೆ ಕೂಡಾ ಪತಿ-ಪತ್ನಿ ಮಧ್ಯೆ ಜಗಳ ನಡೆದಿದೆ.

ಜಗಳ ತಾರಕಕ್ಕೇರಿ ರಸ್ತೆಯಲ್ಲೇ ಗಂಗಾ ಅವರ ಹೊಟ್ಟೆಗೆ ಮೋಹನ್ ರಾಜ್ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕಾಗಮಿಸಿದ್ದ ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ ನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಯುತ್ತಿದೆ.

Related posts

ಮಡಿಕೇರಿ: ಅಭಿಫಾಲ್ಸ್ ಗೆ ಹಾರಿದೆ ಎಂದು ಯಾಮಾರಿಸಿದಳಾ ಯುವತಿ..? ಕೆಲವು ಕಿ.ಮೀ. ಹುಡುಕಿದರೂ ಸುಳಿವಿಲ್ಲ..! ಕಾರ್ಯಾಚರಣೆ ಸ್ಥಗಿತಗೊಳಿಸಿದ ಎನ್‌ ಡಿಆರ್ಎಫ್ ಹೇಳಿದ್ದೇನು..?

ವರವ ಕೊಡು ಮಹಾಲಕ್ಷ್ಮೀ..ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ, ಸಡಗರ

ಸಹೋದರಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್‌ ಕೊಡ್ತೀನಿ ಎಂದ ಪತಿ..! ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಮಾಡಿದ್ದೇನು..?