ಉಡುಪಿಕರಾವಳಿಕ್ರೈಂವೈರಲ್ ನ್ಯೂಸ್

ಉಡುಪಿ: ರಾತ್ರಿ ರಸ್ತೆ ಕಾಮಗಾರಿಯ ಹೊಂಡಕ್ಕೆ ಬಿದ್ದ ಕಾರು..! ಪರಿಶೀಲನೆ ನಡೆಸಿದ ಪೊಲೀಸರು

ನ್ಯೂಸ್ ನಾಟೌಟ್ : ಉಡುಪಿಯ ಅಂಬಲಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆ ಕಾಮಗಾರಿಗಾಗಿ ಅಗೆದಿರುವ ಹೊಂಡಕ್ಕೆ ಕಾರೊಂದು ಬಿದ್ದ ಘಟನೆ ಡಿ.26ರಂದು ರಾತ್ರಿ ನಡೆದಿದೆ.

ಅಂಬಲಪಾಡಿಯಲ್ಲಿ ಅಂಡರ್ ಪಾಸ್ ನಿರ್ಮಿಸಲು ಪಿಲ್ಲರ್ ಗಾಗಿ ಬೃಹತ್ ಹೊಂಡಗಳನ್ನು ತೆಗೆಯಲಾಗಿದ್ದು, ಇಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೆ ಕಳೆದ ರಾತ್ರಿ ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಕೇರಳ ನೋಂದಣಿಯ ಕಾರು ಅತೀ ವೇಗದಿಂದ ಬಂದು ಚಾಲಕನ ನಿಯಂತ್ರಣ ತಪ್ಪಿ ಈ ಹೊಂಡಕ್ಕೆ ಬಿದ್ದಿದೆ.

ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.

Click

https://newsnotout.com/2024/12/kannada-news-dr-manamohan-singh-nomore-venugopal-announcement/
https://newsnotout.com/2024/12/uppinangady-sweets-shop-belthangady-kananda-news-puttur/
https://newsnotout.com/2024/12/kannada-news-arrest-issue-nomore-couple-d/
https://newsnotout.com/2024/12/nandhini-kananda-news-milk-rate-hike-kmf-v/
https://newsnotout.com/2024/12/annamalai-kananda-news-protest-issue-viral-news-bjp/
https://newsnotout.com/2024/12/munirathana-case-fir-100-abouve-fir-bengaluru-nandini-layout/
https://newsnotout.com/2024/12/viral-video-annamalai-viral-video-what-issue/

Related posts

ವಿಕಲಚೇತನ ವ್ಯಕ್ತಿಯನ್ನು ಮಗುವಿನಂತೆ ಎತ್ತಿಕೊಂಡು ಬೇರೊಂದು ಬಸ್‌ ಗೆ ಹತ್ತಿಸಿದ ಕಂಡಕ್ಟರ್, ಮಾನವೀಯತೆ ಕಂಡು ಕರಗಿದ ಜನ

ಪತ್ನಿಯ ಪರ ಪ್ರಚಾರಕ್ಕಿಳಿದ ನಟ ಶಿವರಾಜ್ ಕುಮಾರ್, ನಟನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಮನೆಯ ಬೆಡ್ ರೂಂಗೆ ನುಗ್ಗಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಕಳ್ಳ ಬಜಪೆ ಪೊಲೀಸರ ಬಲೆಗೆ..! ಸಿಕ್ಕಿಬಿದ್ದವನಿಂದ ಪೊಲೀಸರು ವಶಪಡಿಸಿಕೊಂಡಿದ್ದೆಷ್ಟು..?