ಉಡುಪಿ: ದೇಶದಲ್ಲಿ ಗೋವು ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಟ್ಟಿಗೆ ನುಗ್ಗಿ ಗೋವುಗಳನ್ನು ಕಳ್ಳತನ ಮಾಡುವ ಪರಿಸ್ಥಿತಿ ಇದೆ. ಗೋವುಗಳ ರಕ್ಷಣೆಗೆ ಮನೆಯಲ್ಲಿ ತಲ್ವಾರ್ ಗಳನ್ನು ಖರೀದಿಸಿ ಗೋವು ರಕ್ಷಣೆ ಮಾಡಿ ಎಂದು ಸಾಧ್ವಿ ಸರಸ್ವತಿ ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಬೈಲ್, ಕಂಪ್ಯೂಟರ್ ಖರೀದಿಗೆ 50 ಸಾವಿರ, ಒಂದು ಲಕ್ಷ ಕೊಟ್ಟು ಖರೀದಿಸುವ ನಿಮಗೆ ಒಂದು ಸಾವಿರ ರೂಪಾಯಿ ಕೊಟ್ಟು ತಲ್ವಾರ್ ಖರೀದಿಸುವುದು ಕಷ್ಟವಲ್ಲ ಎಂದರು.