ಕ್ರೈಂದೇಶ-ವಿದೇಶವೈರಲ್ ನ್ಯೂಸ್

25 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು UPSC ಗೆ ತಯಾರಿ ನಡೆಸುತ್ತಿದ್ದ ಯುವಕ..! ಪೂರ್ವ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡದ್ದೇಕೆ..?

ನ್ಯೂಸ್ ನಾಟೌಟ್: 25 ಲಕ್ಷ ರೂಪಾಯಿ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು UPSC ಗೆ ತಯಾರಿ ನಡೆಸುತ್ತಿದ್ದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ರಾವತ್‌ಪುರದಲ್ಲಿ ನಡೆದಿದೆ.

ಮೃತ ಕುಲದೀಪ್ ಸಿಂಗ್ ಸೋಲಂಕಿಯ ವಯಸ್ಸು ಕೇವಲ 29 ವರ್ಷ ಎಂದು ವರದಿ ತಿಳಿಸಿದೆ. ಕಾಸ್ಗಂಜ್ ಭುಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಧಪುರದಲ್ಲಿ ವಾಸಿಸುತ್ತಿದ್ದರು. ಕಳೆದೆರಡು ವರ್ಷಗಳಿಂದ ಯುಪಿಎಸ್‌ಸಿಗೆ ತಯಾರಿ ನಡೆಸಲು ತುಳಸಿ ವಿಹಾರದಲ್ಲಿರುವ ಪ್ರಿನ್ಸ್ ಬಾಯ್ಸ್ ಹಾಸ್ಟೆಲ್‌ನಲ್ಲಿದ್ದರು. ಪೂರ್ವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೂ ಕೂಡ ಅಂತಿಮ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿಲ್ಲ. ಇದರಿಂದಾಗಿ ಮನ ನೊಂದು ವಿಷ ಸೇವಿಸಿದ್ದಾರೆ.

ಈ ವಿಷಯ ತಿಳಿದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. “2017ರಲ್ಲಿ ಬಿಟೆಕ್‌ ಮುಗಿಸಿದ ತಕ್ಷಣ ಕುಲದೀಪ್ ಗೆ ವಿದೇಶದಲ್ಲಿ 25 ಲಕ್ಷ ರೂಪಾಯಿ ಸಂಬಳ ಸಿಗುವ ಉದ್ಯೋಗ ಸಿಕ್ಕಿತ್ತು. ಆದರೆ UPSC ಗೆ ತಯಾರಿ ನಡೆಸಲು ಆ ಕೆಲಸ ಬಿಟ್ಟಿದ್ದ. ಇದಲ್ಲದೇ ಕುಲದೀಪ್‌ಗೆ ವಿದೇಶದಿಂದ ಹಲವು ಉದ್ಯೋಗ ಆಫರ್‌ಗಳೂ ಬಂದಿದ್ದವು. ಆದರೆ ಎಲ್ಲಾ ಉದ್ಯೋಗಗಳನ್ನು ತಿರಸ್ಕರಿಸಿದ್ದಾನೆ. ಇದೀಗ UPSCಯ ಅಂತಿಮ ಪಟ್ಟಿಯಲ್ಲಿ ಹೆಸರು ಬಾರದೇ ಇದ್ದಾಗ ಮಾನಸಿಕವಾಗಿ ನೊಂದಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಮೃತ ಕುಲದೀಪ್​​ ಸಹೋದರ ಸಂದೀಪ್ ಹೇಳಿದ್ದಾರೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಕುಲದೀಪ್ ತನ್ನ​​​ ಸಹೋದರ ಸಂದೀಪ್ ಸೋಲಂಕಿ ಮತ್ತು ತಾಯಿ ವಿಮಲಾ ದೇವಿ ಜೊತೆಗೆ ವಾಸಿಸುತ್ತಿದ್ದ. ಇದೀಗ ಮಗನ ಸಾವಿನ ಸುದ್ದಿ ತಿಳಿದು ಕುಟುಂಬ ಆಘಾತಕೊಳ್ಳಗಾಗಿದೆ.

Click

https://newsnotout.com/2024/08/rahul-gandhi-kannada-news-sulthanpurcobbler-viral-news/
https://newsnotout.com/2024/08/prajwal-revanna-case-fsl-report-handover-to-the-sit-and-confirmed/
https://newsnotout.com/2024/08/wayanadu-army-dddbuild-bridge-kannada-news-kannada-landslide/
https://newsnotout.com/2024/08/mother-nomore-doubter-and-son-are-dipression-kannada-news/

Related posts

ಸ್ನಾನದ ಕೋಣೆಯ ಗೋಡೆ ಕುಸಿದು ಮಹಿಳೆ ದುರಂತ ಅಂತ್ಯ ! ನಾಲ್ವರು ಮಕ್ಕಳನ್ನು ಅಗಲಿದ ಬಡ ತಾಯಿ!

ಸುಳ್ಯ: ನಿವೃತ್ತ ಫಾರೆಸ್ಟ್ ಆಫೀಸರ್ ಪದ್ಮಯ್ಯ ಗೌಡ ನಿಧನ, ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ

ವಿವಾಹಕ್ಕೆ ಎರಡು ದಿನವಿರುವಾಗ ವಧು ಆಸ್ಪತ್ರೆಗೆ ದಾಖಲಾದದ್ದೇಕೆ..? ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ವರ!