ನ್ಯೂಸ್ ನಾಟೌಟ್: ಸುಳ್ಯ ನಗರದ ಕೇಂದ್ರಭಾಗದಲ್ಲಿ ಇತ್ತೀಚೆಗೆ ಶುಭಾರಂಭಗೊಂಡ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಬಿಂದು ಜ್ಯುವೆಲ್ಲರಿ ಸಂಸ್ಥೆಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಭೇಟಿ ನೀಡಿ ಶುಭಹಾರೈಸಿದರು. ಈ ಸಂದರ್ಭ ಸಂಸ್ಥೆಯ ಪಾಲುದಾರ ಡಾ.ಅಜಿತೇಶ್ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕಾಸರಗೋಡಿನಲ್ಲಿ ಕಳೆದ 42 ವರ್ಷಗಳಿಂದ ರೀಟೇಲ್ ಜ್ಯುವೆಲ್ಲರಿ ಉದ್ಯಮದಲ್ಲಿ ಹೆಸರಾಂತ ಬ್ರ್ಯಾಂಡ್ ಆಗಿರುವ ಬಿಂದು ಜ್ಯುವೆಲ್ಲರಿ ಇದೀಗ ಸುಳ್ಯದ ಕೇಂದ್ರ ಭಾಗದಲ್ಲಿ ತನ್ನ ನೂತನ ಶಾಖೆಯೊಂದಿಗೆ ಸೇವೆ ನೀಡಲಾರಂಭಿಸಿದೆ. ಗುಣಮಟ್ಟದ ಆಭರಣಗಳನ್ನು ಬಯಸುವ ಗ್ರಾಹಕರನ್ನು ಈ ವಿನೂತನ ಮಳಿಗೆ ಆಹ್ವಾನಿಸುತ್ತಿದೆ.