Latest

ಉಡುಪಿ:ರಸ್ತೆ ಮಧ್ಯೆ ದಾರುಣ ಅಂತ್ಯ ಕಂಡ ಯಕ್ಷಗಾನ ಕಲಾವಿದ!ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಸಾವು

402

ನ್ಯೂಸ್‌ ನಾಟೌಟ್: ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಯಕ್ಷಗಾನ ಯುವ ಕಲಾವಿದನೊಬ್ಬ ದಾರಿ ಮಧ್ಯೆ ದಾರುಣ ಅಂತ್ಯ ಕಂಡ ಘಟನೆ ಬಗ್ಗೆ ವರದಿಯಾಗಿದೆ.  ರಂಜಿತ್ ಬನ್ನಾಡಿ ಜೀವ ಕಳೆದುಕೊಂಡ ಯಕ್ಷಗಾನ ಕಲಾವಿದ. ಇವರು ಸೂರಾಲು ಮೇಳದ ಯುವ ಕಲಾವಿದರಾಗಿದ್ದರು. ನಿಗದಿಯಂತೆ ತೀರ್ಥಹಳ್ಳಿಯ ಕೊಪ್ಪ ಸಮೀಪದ ಕವಡೆಕಟ್ಟೆ ಬಳಿ ಮೇಳದ ಯಕ್ಷಗಾನ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಯಕ್ಷಗಾನ ರದ್ದಾಗಿತ್ತು.

ಹೀಗಾಗಿ ರಂಜಿತ್ ಸ್ನೇಹಿತ ವಿನೋದ್ ರಾಜ್ ಜೊತೆ ದ್ವಿಚಕ್ರ ವಾಹನ ಮೂಲಕ ಹಿಂತಿರುಗಿ ಆಗುಂಬೆ ಬಳಿ ಬರುತ್ತಿದ್ದರು. ಈ ವೇಳೆ ಗಾಳಿ ಮಳೆಗೆ ವಿದ್ಯುತ್ ಕಂಬವೊಂದು ನೆಲಕ್ಕೆ ಬಿದ್ದಿತ್ತು. ಪರಿಣಾಮ ವಿದ್ಯುತ್ ಲೈನ್ ಇವರ ಬೈಕ್​ ಮೇಲೆ ಬಿದ್ದು ಈ ಅವಘಡ ಸಂಭವಿಸಿದ್ದು,ರಂಜಿತ್ ಬನ್ನಾಡಿ ಕೊನೆಯುಸಿರೆಳೆದಿದ್ದಾರೆ. ಇನ್ನು, ರಂಜಿತ್ ಸ್ನೇಹಿತ ವಿನೋದ್ ರಾಜ್ ರಿಗೂ ಗಾಯವಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

See also  ಸುಳ್ಯ: ನಾಗಪಟ್ಟಣದ ವೆಂಟೆಡ್ ಡ್ಯಾಮ್‍ನ ಎಲ್ಲಾ 14 ಗೇಟ್‍ಗಳು ಓಪನ್, ನೀರು ಹೆಚ್ಚಳವಾದ ಹಿನ್ನೆಲೆಯಲ್ಲಿ ಕ್ರಮ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget