ಕ್ರೈಂ

ವಾಲಿಬಾಲ್‌ ಆಡುತ್ತಿದ್ದಾಗ ಮೈದಾನದಲ್ಲೇ ಕುಸಿದು ಯುವಕ ದುರಂತ ಅಂತ್ಯ

ನ್ಯೂಸ್‌ನಾಟೌಟ್‌: ವಾಲಿಬಾಲ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ದುರ್ಗಾ ಅನುದಾನಿತ ಶಾಲೆಯ ಮೈದಾನದಲ್ಲಿ ಶನಿವಾರ ಸಂಜೆ (ಫೆ.25) ನಡೆದಿದೆ.

ಮೃತ ಯುವಕನನ್ನು ಸಂತೋಷ (34) ಎಂದು ಗುರುತಿಸಲಾಗಿದೆ. ಯುವಕ ಕಳೆದ 4 ವರ್ಷಗಳ ಹಿಂದೆ ಹೃದಯಾಘಾತವಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ದುರ್ಗಾ ಅನುದಾನಿತ ಶಾಲೆಯ ಮೈದಾನದಲ್ಲಿ ವಾಲಿಬಾಲ್‌ ಆಡುತ್ತಿರುವಾಗ ಮೈದಾನದಲ್ಲಿ ಸಂತೋಷ್‌ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಾಮುಕರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಯುವತಿಗೆ ಕಾರು ಡಿಕ್ಕಿ..! ಆಕೆಯ ಜೊತೆಗಿದ್ದ ರಮೇಶ್ ಹೇಳಿದ್ದೇನು..?

ಗಣಪತಿ ವಿಸರ್ಜನೆ ಆಟವಾಡುತ್ತಿದ್ದ ಮಗುವಿನ ದುರಂತ ಅಂತ್ಯ! 3 ವರ್ಷದ ಮಗು ಬಾವಿಗೆ ಬಿದ್ದದ್ದು ಹೇಗೆ? ಏನಿದು ದೇವರ ಆಟ?

ಪೈಚಾರ್: ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ..! ಸವಾರರಿಗೆ ಗಾಯ