Latestಕ್ರೈಂದೇಶ-ವಿದೇಶ

ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ತೆರಳಿದ ಯೋಧ ಸಾವು..! ಇಬ್ಬರ ದೇಹವನ್ನು ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ

781

ನ್ಯೂಸ್‌ ನಾಟೌಟ್: ಮಲಪ್ರಭಾ ನದಿಯಲ್ಲಿ ಮುಳುಗಿ ಯೋಧ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಣ್ಣೇರಿ ಗ್ರಾಮ ನಡೆದಿದೆ.

ಮೃತರನ್ನು ಹಂಸನೂರು ಗ್ರಾಮದ ಶೇಖಪ್ಪ(15) ಮತ್ತು ಗದಗ ಜಿಲ್ಲೆಯ ಬೇನಾಳ ಗ್ರಾಮದ ಯೋಧ ಮಹಾಂತೇಶ (25) ಎಂದು ಗುರುತಿಸಲಾಗಿದೆ.

ನದಿಯಲ್ಲಿ ಸ್ನಾನ ಮಾಡಲು 15 ವರ್ಷದ ಬಾಲಕ ಶೇಖಪ್ಪ ಮೊದಲು ನದಿಗೆ ಇಳಿದ್ದರು. ಈ ವೇಳೆ ಈಜಲಾಗದೆ ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ಯೋಧ ಧಾವಿಸಿದ್ದಾರೆ. ಆದರೆ, ನದಿಯ ದಡ ಸೇರಲಾರದೇ ಇಬ್ಬರೂ ಮೃತಪಟ್ಟಿದ್ದಾರೆ.

ಅಗ್ನಿಶಾಮಕ ದಳ ಮತ್ತು ಪೋಲಿಸರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದಾರೆ. ಘಟನೆ ಸಂಬಂಧ ಬಾದಾಮಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  3 ದಶಕಗಳ ನಂತರ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಐಸಿಸಿ ಟೂರ್ನಿ ಚಾಂಪಿಯನ್ಸ್ ಟ್ರೋಫಿಗೆ ಭಯೋತ್ಪಾದಕ ದಾಳಿಯ ಸುಳಿವು..! ವಿದೇಶಿಗರನ್ನು ಅಪಹರಿಸಿ ಸುಲಿಗೆಗೆ ಪ್ಲಾನ್..!
  Ad Widget   Ad Widget     Ad Widget   Ad Widget   Ad Widget   Ad Widget