ಕರಾವಳಿ

ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜಾಥ  ಮತ್ತು  ಕಿರು ನಾಟಕ,ಕ್ಯಾನ್ಸರ್ ಕಾಯಿಲೆ ಬಗ್ಗೆ ಜಾಗೃತಿ ಹಾಗು ಅರಿವು ಕಾರ್ಯಕ್ರಮ

294

ನ್ಯೂಸ್ ನಾಟೌಟ್: ಕೆ.ವಿ.ಜಿ. ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ಇಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಆಯೋಜಿಸಲಾಯಿತು. ಕೆ.ವಿ.ಜಿ  ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕರು ಹಾಗು ಎ.ಓ.ಎಲ್.ಇ(R)  ಅಧ್ಯಕ್ಷರಾದ  ಡಾ| ಕೆ.ವಿ. ಚಿದಾನಂದ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕ್ಯಾನ್ಸರ್ ರೋಗದ ದುಷ್ಪರಿಣಾಮಗಳು ಹಾಗು  ಚಿಕಿತ್ಸೆ ಬಗ್ಗೆ ವಿಶ್ಲೇಷಣೆ ನೀಡಿದರು.

ಈ ಸಂದರ್ಭ  ಎ.ಓ.ಎಲ್.ಇ(R) ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಆಸ್ಪತ್ರೆಯ ಡೀನ್ ಡಾ| ನೀಲಾಂಬಿಕೈ ನಟರಾಜನ್, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಹಾಗು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ| ಲೀಲಾಧರ್ ಡಿ.ವಿ. ಹಾಗು ನರ್ಸಿಂಗ್ ಮತ್ತು ಬಿಪಿಟಿ ಕಾಲೇಜಿನ ಪ್ರಾಂಶುಪಾಲರು ಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಹಾಗು ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕೆ.ವಿ.ಜಿ ಮೆಡಿಕಲ್ ಕಾಲೇಜು, ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗು ಶುಶ್ರುತ ವಿಭಾಗದ ವಿದ್ಯಾರ್ಥಿಗಳು ಜಾಥ  ಮತ್ತು  ಕಿರು ನಾಟಕದ ಮೂಲಕ ಜನ ಸಾಮಾನ್ಯರಲ್ಲಿ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಜಾಗೃತಿ ಹಾಗು ಅರಿವು ಮೂಡಿಸಿದರು.

See also  ಮಡಿಕೇರಿ:ಕಾಫಿ ತೋಟದಲ್ಲಿ ಪತ್ತೆಯಾಯ್ತು ಹುಲಿ ಮೃತದೇಹ, ಮೈಯಲ್ಲಿ ಕಾಣಿಸಿಕೊಂಡ ಗಾಯದ ಗುರುತುಗಳು
  Ad Widget   Ad Widget   Ad Widget   Ad Widget   Ad Widget   Ad Widget   Ad Widget