ಕ್ರೈಂವೈರಲ್ ನ್ಯೂಸ್

ಕೆಟ್ಟು ನಿಂತಿದ್ದ ವಾಹನದಡಿ ಸಿಲುಕಿದ್ದೇಗೆ ಆ ಮೂವರು..? ಸ್ಥಳದಲ್ಲೆ ಪ್ರಾಣ ಬಿಟ್ಟದ್ದೇಗೆ ಕಾರ್ಮಿಕರು?

191

ನ್ಯೂಸ್ ನಾಟೌಟ್: ಕೆಟ್ಟು ನಿಂತಿದ್ದ ಗೂಡ್ಸ್ ವಾಹನವನ್ನು ದುರಸ್ತಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟ್ಯಾಂಕರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ಇವಣಿ ಬಳಿ ಕಳೆದ ರಾತ್ರಿ ನಡೆದಿದೆ.

ಮೃತರನ್ನು ಪ್ರಶಾಂತ, ವಿಠಲ್ ಹಾಗೂ ಮಂಗಲಿ ಎಂದು ಗುರುತಿಸಲಾಗಿದ್ದು, ಕಲಬುರಗಿಯಿಂದ ಸೇಡಂ ಮಾರ್ಗವಾಗಿ ಹೈದರಾಬಾದಗೆ ತೆರಳುತ್ತಿದ್ದ ಗೂಡ್ಸ್ ಲಾರಿ ಇವಣಿ ಬಳಿ ತಲುಪಿದಾಗ ಕೆಟ್ಟು ನಿಂತಿತ್ತು.

ರಿಪೇರಿ ಮಾಡುತ್ತಿದ್ದ ವೇಳೆ ಸಿಮೆಂಟ್ ಟ್ಯಾಂಕರ್ ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ.

https://newsnotout.com/2023/12/news-banana-tree-form-news/
See also  ಸೇಫ್ ಆದರೂ ಬಿಗ್ ಬಾಸ್ ಮನೆಯಿಂದ ಹೊರನಡೆಯಲು ತೀರ್ಮಾನಿಸಿದ ವರ್ತೂರ್ ಸಂತೋಷ್..! ವರ್ತೂರ್ ತೀರ್ಮಾನಕ್ಕೆ ಕಿಚ್ಚ ಸುದೀಪ್ ಅಸಮಾಧಾನ
  Ad Widget   Ad Widget   Ad Widget   Ad Widget   Ad Widget   Ad Widget   Ad Widget