ನ್ಯೂಸ್ ನಾಟೌಟ್: ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ರಾತ್ರಿ ಸಮಯದಲ್ಲಿ ಇಬ್ಬರು ಸಿಬ್ಬಂದಿಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇದೇ ತಿಂಗಳ 10 ರಂದು ರಾತ್ರಿ ಕಂಪ್ಯೂಟರ್ ವಿಭಾಗದಲ್ಲಿ ಮಹಿಳಾ ಪೇದೆ ರೇಣುಕಾ ಎಂಬುವವರು ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಠಾಣೆಯ ಎಎಸ್ ಐ ತಿಮ್ಮೇಗೌಡ ಠಾಣೆಯಲ್ಲಿರುವ, ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಊಟ ಕೊಡಲು ಮಹಿಳಾ ಪೇದೆ ಹೇಳಿದ್ದರಂತೆ.
ತಡರಾತ್ರಿ 2.30ಕ್ಕೆ ಹೆಣ್ಣು ಮಕ್ಕಳನ್ನ ತನಿಖಾ ಸಹಾಯಕರ ಕೊಠಡಿಗೆ ಕರೆದೊಯ್ದು ರೇಣುಕಾ ಊಟ ಮಾಡಿಸಿದ್ದಾರೆ. ಈ ವೇಳೆ ಹೆಡ್ ಕಾನ್ ಸ್ಟೇಬಲ್ ಗೋವಿಂದರಾಜು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ ಎಂದು ದೂರಲಾಗಿದೆ. ಇದನ್ನ ಪ್ರಶ್ನಿಸಿದ್ದ ಪೇದೆ ರೇಣುಕಾಗೆ ಗೋವಿಂದರಾಜು ಅವಾಚ್ಯ ಶಬ್ಧಗಳಿಂದ ನಿಂದಿಸಿ ಶೂ ಕಾಲಿನಿಂದ 3-4 ಬಾರಿ ಒದ್ದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಠಾಣೆಯಲ್ಲೇ ಕರ್ತವ್ಯದಲ್ಲಿದ್ದ ಎಎಸ್ ಐ ತಿಮ್ಮೇಗೌಡ, ಕಾನ್ ಸ್ಟೇಬಲ್ ಗಳಾದ ಬಸಪ್ಪ, ಮಹೇಶ್ ಎಲ್ಲರೂ ಹೋಗಿ ಆತನನ್ನು ಬಿಡಿಸಲು ಯತ್ನಿಸಿದ್ರೂ ಕೂಡ ಗೋವಿಂದರಾಜು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಾನ್ಸ್ ಟೇಬಲ್ ರೇಣುಕಾ ದೂರು ಆಧರಿಸಿ ಹೆಡ್ ಕಾನ್ ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“10-06-2025ರಂದು ನಾನು ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೆ. ಈ ವೇಳೆ ಠಾಣೆಯ ಎಎಸ್ ಐ ತಿಮ್ಮೇಗೌಡ ಅವರು ಠಾಣೆಯಲ್ಲಿರುವ, ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಊಟ ಕೊಡಲು ಹೇಳಿದ್ರು. ಅದರಂತೆ ನಾನು ಊಟ ಕೊಟ್ಟು ಬಂದಿದ್ದೆ. ಊಟ ಮಾಡ್ತಿದ್ದ ಇಬ್ಬರು ಹೆಣ್ಣು ಮಕ್ಕಳು, ನಿಮ್ಮ ಕಾನ್ಸ್ ಟೇಬಲ್ ಹೆಣ್ಣುಮಕ್ಕಳ ಬಗ್ಗೆ ತುಂಬಾ ಕೆಟ್ಟದಾಗಿ ಮಾತಾಡಿದ್ರು ಎಂದು ನನಗೆ ಹೇಳಿದ್ರು.ನಾನು ಯಾಕೆ ಹೆಣ್ಮಕ್ಕಳ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಮಾತಾಡಿದ್ದೀರಾ ಎಂದು ನಾನು ಗೋವಿಂದರಾಜು ಅವರನ್ನು ಪ್ರಶ್ನೆ ಮಾಡಿದೆ. ಈ ವೇಳೆ ನನ್ನನ್ನೇ ಜೋರಾಗಿ ಬೈಯ್ಯಲು ಶುರು ಮಾಡಿದ್ರು. ಕರ್ತವ್ಯದಲ್ಲಿದ್ದ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ 3-4 ಬಾರಿ ಬೂಟಿನ ಕಾಲಿನಲ್ಲಿ ಒದ್ದಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಾಕು ನುಂಗಿ ಒದ್ದಾಡಿದ ನಾಗರ ಹಾವು..! ಹಾವನ್ನು ರಕ್ಷಿಸಿದ್ದೇ ರೋಚಕ..!