ನ್ಯೂಸ್ ನಾಟೌಟ್:ಈ ಪ್ರಪಂಚದಲ್ಲಿ ಒಳ್ಳೆಯವ್ರಿಗೆ ಕಾಲವೇ ಇಲ್ಲದಾಗಿ ಹೋಗಿದೆ.ನಿಯತ್ತಾಗಿ ದುಡಿದು ತಿನ್ನುವವರಿಗೆ ಮರ್ಯಾದೆಯೇ ಇಲ್ಲದಾಗಿದೆ.ಹೌದು,ಆ ವ್ಯಕ್ತಿ ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಸಾಲ ಸೋಲ ಮಾಡಿ ಮದುವೆಯಾದ.ಆದರೂ ಕಟ್ಟಿಕೊಂಡ ಹಂಡ್ತಿಗೆ ಒಂಚೂರು ನೋವಾಗಬಾರದು.ಆಕೆಯನ್ನ ಹೂವಿನಂತೆ ನೋಡಿಕೊಳ್ಳಬೇಕು ಎನ್ನುತ್ತಾ ಹಣಕ್ಕಾಗಿ ಹಗಲು ರಾತ್ರಿ ಎನ್ನುತ್ತಾ ಕೆಲಸ ನಿರ್ವಹಿಸುತ್ತಿದ್ದ.ಆದರೆ ಆತನ ಹೆಂಡ್ತಿ ಮಾಡಿದ್ದೇನು ಗೊತ್ತಾ? ಈ ಕಥೆ ಕೇಳಿದ್ರೆ ನೀವೂ ಬೆಚ್ಚಿ ಬೀಳ್ತಿರಾ..!..
ಅಂದು ಬೆಳ್ಳಂಬೆಳಗ್ಗೆ ಆಕೆ ಗಂಡ ತನ್ನ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದ..!ಇನ್ನೇನಿದ್ರೂ ಕೂಡ ಬರೋದು ನಾಳೆ ಬೆಳಗ್ಗೆಯೇ ಅಂದು ಕೊಂಡು ಫುಲ್ ಜಾಲಿ ಮೂಡ್ನಲ್ಲಿ ತೇಲಾಡಿದ ಹೆಂಡ್ತಿ ತನ್ನ ಪ್ರಿಯಕರನನ್ನು ಬರೋದಕ್ಕೆ ಹೇಳಿದ್ಲು.ಆತನು ಕೂಡ ಆಕೆ ಫೋನ್ ಎಷ್ಟೋತ್ತಿಗೆ ಬರುತ್ತೆ ಅನ್ನೋದನ್ನು ಕಾಯ್ತಿದ್ದ.ಸ್ವಲ್ಪ ಹೊತ್ತಲ್ಲೇ ಬಂದೇ ಬಿಟ್ಟ.
ಇಬ್ಬರೂ ಖುಷಿಯಿಂದ ಕುಣಿದಾಡಿ ಸರಸಕ್ಕೆ ಶುರುವಿಟ್ಟುಕೊಂಡಿದ್ದರು.ಆಗಲೇ ಕೇಳಿತು ಬಾಗಿಲು ಬಡಿದ ಶಬ್ದ.ಯಾರಪ್ಪಾ ಇಷ್ಟೊತ್ತಿನಲ್ಲಿ ಎಂದು ಬಾಗಿಲು ಓಪನ್ ಮಾಡಿದ್ರು.ಬಾಗಿಲ ಎದುರಲ್ಲಿಯೇ ಗಂಡ ನಿಂತುಕೊಂಡು ಬಿಟ್ಟಿದ್ದ.ಹಾಗಂತ ಆತ ಮುದ್ದಾದ ಹೆಂಡ್ತಿ ಮೇಲಿನ ಸಂಶಯದಿಂದ ಬಂದಿದ್ದಲ್ಲ..!ಬದಲಾಗಿ ಆತ ಹಗಲು ಹೊತ್ತಲ್ಲಿ ಕೆಲಸಕ್ಕೆ ಹೋಗೋ ಸ್ಟೋರ್ನಲ್ಲಿ ಅಂದು ಕೆಲಸವಿರಲಿಲ್ಲ.ಹಾಗೆ ಏನು ಮಾಡೋಣ ನೇರವಾಗಿ ಮನೆಗೆ ಬಂದು ಬಿಟ್ಟಿದ್ದ. ಹಾಗೆ ಬಂದವನಿಗೆ ನೋಡಿದರೆ ಇಲ್ಲಿ ಕಂಡಿದ್ದೇ ಬೇರೆ. ಇದನ್ನೆಲ್ಲ ನೋಡಿದ ಅವನು ಕೆಲವೇ ನಿಮಿಷದಲ್ಲಿ ಶೌಚಾಲಯದ ಬಳಿ ಉಸಿರು ಚೆಲ್ಲಿದ್ದ ಸ್ಥಿತಿಯಲ್ಲಿ ಬಿದ್ದಿದ್ದ. ಆತನ ಹೆಂಡತಿ ಕೂಡ ಅಯ್ಯೋ ಅಯ್ಯೋ ನನ್ನ ಗಂಡನಿಗೇನಾಯಿತು ಎಂದು ಬೊಬ್ಬಿಡುತ್ತಾ ಹೊರಗಡೆ ಓಡೋಡಿ ಬರುತ್ತಾಳೆ.
ಇಂತಹ ಘಟನೆ ಬೆಳಕಿಗೆ ಬಂದಿರೋದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ವ್ಯಾಪ್ತಿಯಲ್ಲಿ. ಇದು ವೆಂಕಟರಮಣ (35) ಎಂಬವನ ದುರಂತ ಅಂತ್ಯದ ಕಥೆ. ವೆಂಕಟರಮಣ ಹಗಲಿನಲ್ಲಿ ಒಂದು ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಎಚ್.ಎಸ್.ಆರ್ ಲೇಔಟ್ನಲ್ಲಿನ ಒಂದು ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.ಬೆಂಗಳೂರು ಬೇರೆ. ಜೀವನ ಮಾಡೋದೆ ಕಷ್ಟ.ಇದಕ್ಕಾಗಿ ಎಷ್ಟು ಹಣವಿದ್ರೂ ಸಾಲೋದಿಲ್ಲ.ಹೀಗಿರುವಾಗ ಗಂಡ ಹಗಲು ರಾತ್ರಿ ದುಡಿಯೋದು ಕೂಡ ಅನಿವಾರ್ಯವಾಗಿ ಬಿಟ್ಟಿತ್ತು.ಆದರೆ ಮನೆಯಲ್ಲೇ ಇದ್ದ ಹೆಂಡತಿ ನಂದಿನಿ ಆಗಾಗ ಆಂಧ್ರ ಪ್ರದೇಶದಲ್ಲಿರುವ ತನ್ನ ಪ್ರಿಯಕರನನ್ನು ಕರೆಸಿಕೊಂಡು ಆಸೆ ಪೂರೈಸಿಕೊಳ್ಳುತ್ತಿದ್ದಳು. ಕಳೆದ ಜನವರಿ 6ರಂದು ಕೂಡಾ ಇದೆ ಘಟನೆ ನಡೆದಿತ್ತು.
ಗಂಡ ಕೆಲಸಕ್ಕೆ ಹೋಗಿರುವುದನ್ನು ಖಚಿತಪಡಿಸಿಕೊಂಡ ನಂದಿನಿ ತನ್ನ ಪ್ರಿಯಕರ ನಿತೀಶ್ ಕುಮಾರ್ನನ್ನು ಅಂದು ಕರೆಸಿಕೊಂಡಿದ್ದಳು. ನಿತೀಶ್ ಮತ್ತು ನಂದಿನಿ ಇಬ್ಬರೂ ಆಂಧ್ರ ಪ್ರದೇಶದ ಸತ್ಯ ಸಾಯಿ ತಾಲ್ಲೂಕಿನವರು. ಬಾಲ್ಯದಿಂದ ಸ್ನೇಹಿತರಾಗಿದ್ದವರು ಬಳಿಕ ಪ್ರೇಮಿಗಳಾಗಿದ್ದಾರೆ. ಆದರೆ, ಅದ್ಯಾಕೋ ಗೊತ್ತಿಲ್ಲ. ಪ್ರೀತಿಸಿದವರು ಮದುವೆಯಾಗಲಿಲ್ಲ.
ಇತ್ತ ಮದುವೆಯಾದ ನಂದಿನಿ ಬೆಂಗಳೂರಿಗೆ ಬಂದಿದ್ದಾಳೆ.ಆದರೆ ಗಂಡ ಹಗಲು ರಾತ್ರಿ ಡಬಲ್ ಡ್ಯೂಟಿ ಮಾಡುತ್ತಿರುವುದರ ಲಾಭ ಪಡೆದ ನಂದಿನಿ ಆಗಾಗ ನಿತೇಶ್ ಕುಮಾರ್ನನ್ನು ಕರೆಸಿಕೊಳ್ಳುತ್ತಿದ್ದಳು. ಅವರಿಬ್ಬರು ನಿರಂತರವಾಗಿ ಸರಸದಲ್ಲಿ ತೊಡಗಿದ್ದರು.ಅಂತೆಯೇ ಅವನು ಜನವರಿ 6ರಂದು ನಂದಿನಿ ಮನೆಗೆ ಬಂದಿದ್ದ. ಆದರೆ, ನಂದಿನಿ ಪ್ಲ್ಯಾನ್ ಎಲ್ಲವೂ ಉಲ್ಟಾ ಹೊಡೀತು.ಅವನನ್ನು ಕಂಡು ಅವಾಕ್ಕಾದ ಪ್ರೇಮಿಗಳು ಹೀಗೇ ಬಿಟ್ಟರೆ ಆಗದು ಎಂದು ಆತನನ್ನು ಹಿಡಿದು ಕಲ್ಲಿನೊಂದಿಗೆ ಜಜ್ಜಿದ್ದಾರೆ. ಇಬ್ಬರು ಸೇರಿ ಬಾರದ ಲೋಕಕ್ಕೆ ಕಳುಹಿಸಿದ್ದಾರೆ.
ಇದೆಲ್ಲ ಆದ ಬಳಿಕ ಉಸಿರು ಚೆಲ್ಲಿದ ಗಂಡನನ್ನು ಶೌಚಾಲಯದ ಬಳಿ ತಂದು ಹಾಕಿದ್ದಾರೆ. ಪ್ರಿಯಕರ ನಿತೇಶ್ ಕುಮಾರ್ ಜಾಣತನದಿಂದ ತಪ್ಪಿಸಿಕೊಂಡಿದ್ದಾನೆ. ಇತ್ತ ನಂದಿನಿ ಒಬ್ಳೆ ಇದ್ದುಕೊಂಡು, ಕೂಡಲೇ ಪೊಲೀಸರಿಗೆ ಕರೆ ಮಾಡ್ತಾಳೆ. ನನ್ನ ಗಂಡ ಹೊರಗೆ ಹೋದವರು ಹುಷಾರಿಲ್ಲ ಎಂದು ಮರಳಿ ಬಂದರು. ಬಂದವರೇ ಟಾಯ್ಲೆಟ್ಗೆ ಹೋಗಿ ಅಲ್ಲೇ ಹೃದಯಾಘಾತದಿಂದ ಕಾಣದ ಲೋಕಕ್ಕೆ ತೆರಳಿದ್ದಾರೆ ಎಂದು ಹೇಳಿದ್ದಳು.
ಇದನ್ನು ತಿಳಿದ ಪೊಲೀಸರು ಆಂಬ್ಯುಲೆನ್ಸ್ ಸಹಿತ ಧಾವಿಸಿ ಆತನ ಶವವನ್ನು ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದರು. ಆಗ ಇದೊಂದು ಹೃದಯಾಘಾತವಲ್ಲಅನ್ನುವ ಸಂಶಯ ಬರುತ್ತೆ. ಇಲ್ಲಿ ನಂದಿನಿಯೋ ಪರಮ ಪತಿವೃತೆಯಂತೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ನೋವಿನಲ್ಲಿ ಗೋಳಾಡುತ್ತಿದ್ದಳು..! ಆದರೆ, ಪೊಲೀಸರಿಗೆ ಆಕೆಯ ಮೇಲೆ ಮೊದಲೇ ಸಂಶಯ ಬಂದಿತ್ತು. ಸ್ಥಳ ಪರಿಶೀಲನೆ, ಹೆಂಡತಿಯ ನಡವಳಿಕೆಯಿಂದ ಸಣ್ಣದೊಂದು ಗುಮಾನಿ ಬಂದಿದ್ದು, ವೈದ್ಯರ ವರದಿ ಬರುತ್ತಿದ್ದಂತೆಯೇ ಅದು ದೃಢವಾಯಿತು.
ಮೊದಲೇ ಪತ್ನಿ ನಂದಿನಿ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದ್ದಾರೆ. ಆಗ ತಾನೇ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ಮುಗಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದೀಗ ಆಕೆ ಮತ್ತು ಪ್ರಿಯಕರ ನಿತೀಶ್ ಕುಮಾರ್ನನ್ನು ಬಂಧಿಸಲಾಗಿದೆ. ಇಬ್ಬರನ್ನೂ ಬಂಧಿಸಿದ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.