ಕರಾವಳಿಸುಳ್ಯ

ಅಕ್ಟೋಬರ್‌ನಲ್ಲಿ ಸುಳ್ಯದಲ್ಲಿ ನಡೆಯಲಿರುವ ಮಹಿಳಾ ಸಮಾವೇಶದ ಉದ್ದೇಶವೇನು?,ಪ್ರಧಾನಿಗೆ ಅಭಿನಂದನೆ ಸಲ್ಲಿಸಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಹೇಳಿದ್ದೇನು?ಇಲ್ಲಿದೆ ಡಿಟೇಲ್ಸ್ ..

ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಹಿಳಾ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಸುಳ್ಯ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡುತ್ತಾ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಯನ್ನೂ ಸಲ್ಲಿಸಿದರು.

ಈ ಬಗ್ಗೆ ಟ್ರಸ್ಟ್ ಅಧ್ಯಕ್ಷೆ ಇಂದಿರಾ ರಾಜಶೇಖರ ರೈಯವರು ಮಾತನಾಡುತ್ತಾ ಸಂತಸ ವ್ಯಕ್ತ ಪಡಿಸಿದರು. ಹಲವಾರು ವರ್ಷಗಳ ಕನಸು ಇದು. ಮಹಿಳಾ ಮೀಸಲಾತಿ ಬಿಲ್ ನ್ನು ಪಾಸ್ ಮಾಡಿ ಇಡೀ ದೇಶದ ಮಹಿಳೆಯರಿಗೆ ಅವಕಾಶ ನೀಡಿರುವ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೊದಿಯವರಿಗೆ ಈ ಮೂಲಕ ಅಭಿನಂದನೆಯನ್ನು ಸಲ್ಲಿಸಲೇಬೇಕು ಎಂದು ಹೇಳಿದರು.

ಇದಕ್ಕಾಗಿ ಪ್ರಧಾನಿ ಮೋದಿಯವರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುವ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ.ಮುಂದಿನ ತಿಂಗಳು ದಿನಾಂಕ ನಿಗದಿ ಮಾಡಿ ಈ ಸಮಾವೇಶ ಏರ್ಪಾಟು ಮಾಡಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಗುಣವತಿ ಕೊಲಂತ್ತಡ್ಕ, ಕೋಶಾಧಿಕಾರಿ ಜಯಂತಿ ಜನಾರ್ದನ, ಸಹ ಕೋಶಾಧಿಕಾರಿ ಶಾರದಾ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ನಿರ್ದೇಶಕರಾದ ದಿವ್ಯ ಮಡಪ್ಪಾಡಿ, ಸವಿತಾ ಕಾಯರ, ಲೋಲಾಕ್ಷಿ ವೀಣಾ ಮೋಂಟಡ್ಕ ಉಪಸ್ಥಿತರಿದ್ದರು.

Related posts

ಮೋದಿ ಜೊತೆ ಪ್ರಮಾಣವಚನ ಸ್ವೀಕರಿಸಲಿದ್ದಾರಾ ಹೆಚ್.ಡಿ ಕುಮಾರಸ್ವಾಮಿ..? ಸಂಸದ ಡಾ.ಮಂಜುನಾಥ್‌ ಈ ಬಗ್ಗೆ ಹೇಳಿದ್ದೇನು..?

ಬಿಬಿಎಸ್‌ 10ನಲ್ಲಿ ಡ್ರೋಣ್ ಪ್ರತಾಪ್ ಗೆಲ್ಲದಿದ್ರೆ ಅರ್ಧಮೀಸೆ,ಗಡ್ಡ ಬೋಳಿಸಿ,ಮೆಣಸನ್ನೂ ತಿನ್ತೀನಿ..!,ಕೊಟ್ಟ ಮಾತಿನಂತೆ ನಡೆದುಕೊಂಡು ವಿಡಿಯೋ ಹರಿಬಿಟ್ಟ ಕಡಬದ ಯುವಕ..!ಏನಿದು ವಿಚಾರ? ಇಲ್ಲಿದೆ ರಿಪೋರ್ಟ್..

ಉಪ್ಪಿನಂಗಡಿ: ಪೆರ್ನೆ ಗ್ಯಾಸ್ ಟ್ಯಾಂಕರ್ ದುರಂತಕ್ಕೆ 10 ವರ್ಷ,ಮಾಸದ ಕಹಿ ನೆನಪು