ಕ್ರೈಂ

ಹಣ ಕೊಟ್ಟು ಯಾಮಾರಬೇಡಿ…ವಿಟ್ಲದಲ್ಲಿ ಮಹಿಳೆಯಿಂದ ಮಹಿಳೆಗೆ ಮಹಾವಂಚನೆ

567

ವಿಟ್ಲ: ಮಹಿಳೆಯಿಂದ ಹಣ ಪಡೆದಿದ್ದ ಮತ್ತೋರ್ವ ಮಹಿಳೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಶರವು ಪಡ್ಪು ಎಂಬಲ್ಲಿನ ಹರೀಶ್‌ ರವರ ಪತ್ನಿ ಪ್ರೇಮ ದೂರುದಾರರಾಗಿದ್ದಾರೆ. ಬಂಟ್ವಾಳ ಅನಂತಾಡಿ ಗ್ರಾಮದ ಬಾಕಿಲ ನಿವಾಸಿ ರೋಹಿಣಿ ಯಾನೆ ರೂಪ ಮೇಲೆ ಆರೋಪ ಕೇಳಿ ಬಂದಿದೆ. ರೂಪ ಇನ್ವೆಸ್ಟ್ ಮೆಂಟ್‌ ಸಂಸ್ಥೆಯೊಂದರಲ್ಲಿ ಹಣ ಇಡುವಂತೆ ಒತ್ತಾಯಿಸಿ ಪ್ರೇಮ ಅವರಿಂದ 5 ಲಕ್ಷ ರೂ, ಪಡೆದುಕೊಂಡು ಅದರಲ್ಲಿ ಸ್ವಲ್ಪ ಹಣವನ್ನು ಇವರಿಗೆ ಕೊಟ್ಟಂತೆ ಮಾಡಿ ಇನ್ನೂ 3,90,000 ರೂ. ಅನ್ನು ನೀಡಿಲ್ಲ. ಕೇಳಿದರೆ ನನಗೊತ್ತಿಲ್ಲ ನೀನು ಏನು ಬೇಕಾದರೂ ಮಾಡಿಕೋ ಎಂದು ಹೇಳಿದ್ದಾರೆ ಎಂದು ಪೊಲೀಸ್ ಠಾಣೆಗೆ ಪ್ರೇಮ ದೂರು ನೀಡಿದ್ದಾರೆ.

See also  ದರ್ಶನ್ ಪ್ರಕರಣ: ದೇವರಂತಹ ಮನುಷ್ಯ, ನಾಯಿಯಂತಹ ಬುದ್ಧಿ ಎಂದ ತಗಡು ವಿವಾದದ ಉಮಾಪತಿ..! ದರ್ಶನ್ ನನ್ನ ಸೆಟ್‌ ನಲ್ಲೂ ಯಾರಿಗೋ ಎರಡು-ಮೂರು ಸಲ ಹೊಡೆದಿದ್ದರು ಎಂದ ನಿರ್ಮಾಪಕ..!
  Ad Widget   Ad Widget     Ad Widget   Ad Widget   Ad Widget   Ad Widget