Latestಕ್ರೀಡೆಕ್ರೀಡೆ/ಸಿನಿಮಾಕ್ರೈಂಬೆಂಗಳೂರುರಾಜಕೀಯರಾಜ್ಯ

ಮಾತೇ ಬರದಂತಾಗಿದೆ, ಹೃದಯ ಒಡೆದಿದೆ ಎಂದ ವಿರಾಟ್ ಕೊಹ್ಲಿ..! ಆರ್‌ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದ ಬಗ್ಗೆ ವಿರಾಟ್ ಕೊಹ್ಲಿ ಮೊದಲ ಪ್ರತಿಕ್ರಿಯೆ..!

1.1k

ನ್ಯೂಸ್‌ ನಾಟೌಟ್‌: ಆರ್‌ ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, ಮಾತೇ ಬರದಂತಾಗಿದೆ, ಹೃದಯ ಒಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬುಧವಾರ(ಜೂ.4) ನಡೆದ ಘಟನೆಯ ಬಗ್ಗೆ ಆರ್‌ ಸಿಬಿ ದುಃಖ ವ್ಯಕ್ತಪಡಿಸಿದೆ, ನಮ್ಮ ತಂಡದ ಆಗಮನಕ್ಕಾಗಿ ಅಭಿಮಾನಿಗಳ ದೊಡ್ಡ ದಂಡೇ ನಮಗಾಗಿ ಕಾಯುತ್ತಿತ್ತು. ಆದರೆ ಈ ವೇಳೆಗೆ ಆಗಬಾರದ ಅನಾಹುತ ನಡೆದಿದೆ. ಈ ದುರದೃಷ್ಟಕರ ಘಟನೆಯಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗ ಕ್ಷೇಮ ನಮಗೆ ಮುಖ್ಯವಾಗಿದೆ. ಘಟನೆಯ ಕುರಿತು ಆರ್‌ ಸಿಬಿ ಶೋಕ ವ್ಯಕ್ತಪಡಿಸುತ್ತದೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತದೆ.

ಘಟನೆ ನಮ್ಮ ಗಮನಕ್ಕೆ ಬಂದ ತಕ್ಷಣ ನಾವು ನಮ್ಮ ಕಾರ್ಯಕ್ರಮದ ವೇಳಾಪಟ್ಟಿ ತಿದ್ದುಪಡಿ ಮಾಡಿದೆವು. ಸ್ಥಳೀಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದೆವು. ನಮ್ಮ ಎಲ್ಲಾ ಅಭಿಮಾನಿಗಳು ದಯವಿಟ್ಟು ಸುರಕ್ಷಿತವಾಗಿರಿ ಎಂದು ನಾವು ಈ ಮೂಲಕ ವಿನಂತಿ ಮಾಡುತ್ತೇವೆ ಎಂದು ಹೇಳಿದ್ದಾರೆ.

18 ವರ್ಷಗಳ ಬಳಿಕ ಆರ್ ಸಿಬಿ ತಂಡ ಐಪಿಎಲ್‌ ಟ್ರೋಫಿ ಗೆದ್ದುಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ ಪರಿಣಾಮ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ. ಹಲವರು ಅಸ್ವಸ್ಥಗೊಂಡು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಉಪ್ಪಿ­ಟ್ಟುಬೇಡ, ಬಿರಿಯಾನಿ ಬೇಕು’ ಎಂದ ಮಗುವಿನ ವಿಡಿಯೋ ವೈರಲ್ ಆದ ಬಳಿಕ ಸರ್ಕಾರದ ಮಹತ್ವದ ನಿರ್ಧಾರ..! ಕೇರಳ ಅಂಗನವಾಡಿ ಮೆನುಗೆ ಮೊಟ್ಟೆ ಬಿರಿಯಾನಿ ಸೇರ್ಪಡೆ..!

ಸರ್ಕಾರದ ಪ್ರಚಾರದ ಹುಚ್ಚಿಗೆ ಜನರು ಬಲಿಯಾಗಿದ್ದಾರೆ ಎಂದ ವಿಜಯೇಂದ್ರ..!ನ್ಯಾಯಾಂಗ ತನಿಖೆಗೆ ಆಗ್ರಹ..!

See also  ಕನ್ನಡ ಧಾರವಾಹಿಯಲ್ಲಿ ನಟಿಸಲಿರುವ ಖ್ಯಾತ ನಟ ಸುಮನ್ ತಲ್ವಾರ್, ಮಂಗಳೂರು ಮೂಲದ ಬಹುಭಾಷಾ ನಟ ಕಿರುತೆರೆಗೆ
  Ad Widget   Ad Widget     Ad Widget   Ad Widget   Ad Widget   Ad Widget