ನ್ಯೂಸ್ ನಾಟೌಟ್ : ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮಡೆನೂರು ಮನು ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಸಹ-ನಟಿ ಮಾಡಿದ ಗಂಭೀರ ಆರೋಪಗಳಿಂದ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕಿರುಕುಳ, ಅತ್ಯಾಚಾರ ಆರೋಪದ ಜೊತೆಗೆ ನಟ ಮಡೆನೂರು ಮನು ಆಡಿಯೋ ಕೂಡ ವೈರಲ್ ಆಗಿತ್ತು. ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಬಗ್ಗೆ ಕೀಳಾಗಿ ಮಡೆನೂರು ಮನು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಗ್ಗೆ ಮಡೆನೂರು ಮನು ಮಾತನಾಡಿದ್ದ ಆಡಿಯೋಗೆ ಈಗ ಅವರೇ ಸ್ಪಷ್ಟನೆ ನೀಡಿದ್ದಾರೆ. ನಟ ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿರುವ ಮಡೆನೂರು ಮನು ಧ್ರುವ ಸರ್ಜಾ ಬಳಿ ಕ್ಷಮೆ ಕೇಳಿದ್ದಾರೆ. ಮನುವನ್ನು ಕ್ಷಮಿಸಿರುವ ಧ್ರುವ ಸರ್ಜಾ, ಶಿವಣ್ಣ, ದರ್ಶನ್ ಬಳಿ ಕ್ಷಮೆ ಕೇಳುವಂತೆ ಸಲಹೆ ನೀಡಿದ್ದಾರೆ.
ಅಣ್ಣಾ ನಮಸ್ತೆ.. ಮಡೆನೂರು ಮನು ಮಾತನಾಡುತ್ತಾ ಇದ್ದೀನಿ. ನಾನು ನಿಜವಾಗಲೂ ಉದ್ದೇಶಪೂರ್ವಕವಾಗಿ ನಾನು ಮಾತನಾಡಿಲ್ಲ ಅಣ್ಣಾ. ನಾನು ತಪ್ಪು ಮಾಡಿಲ್ಲ. ನನ್ನಿಂದ ತಪ್ಪು ಮಾಡಿಸಿದ್ದಾರೆ.
ಒಂದು ಒಳ್ಳೆಯ ಸಿನಿಮಾವನ್ನು ಎಲ್ಲರೂ ಸೇರಿಕೊಂಡು ಕೊಂದು ಬಿಟ್ಟಿದ್ದಾರೆ. ಮುಂದೆ ಏನಾಗುತ್ತೋ ನನಗೆ ಗೊತ್ತಿಲ್ಲ. ಸಿನಿಮಾದಿಂದ ಬ್ಯಾನ್ ಮಾಡುವ ಬಗ್ಗೆ ಎಲ್ಲರೂ ಹೇಳುತ್ತಿದ್ದಾರೆ. ನೀವೆಲ್ಲಾ ಮನಸು ಮಾಡಿದ್ರೆ ನಾನು ಮತ್ತೆ ನನ್ನ ಜೀವನ ಕಟ್ಟಿಕೊಳ್ತೀನಿ. ಎಂದು ಮೆಸೇಜ್ ಮಾಡಿದ್ದಾರೆ. ಇದಕ್ಕೆ ಧ್ರುವ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.ಶಿವಣ್ಣ ಸಾರ್, ದರ್ಶನ್ ಸಾರ್ ನನಗಿಂತ ಸೀನಿಯರ್ಸ್. ಅವರ ಜೊತೆಗೆ ಮಾತನಾಡಿ. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಡೋಂಟ್ ವರಿ. ದಯವಿಟ್ಟು ನಿಮ್ಮ ತಾಯಿ, ಹೆಂಡತಿ, ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ನಟ ಧ್ರುವ ಸರ್ಜಾ ಅವರು ರಿಪ್ಲೈ ಮಾಡಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಂಗಳೂರಿಗೆ ಆಗಮಿಸಿದ NIA ತಂಡ..! ವಿಭಿನ್ನ ಆಯಾಮದ ತನಿಖೆಗೆ ಚುರುಕು..!
ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ..! ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ..!