ರಾಜಕೀಯವೈರಲ್ ನ್ಯೂಸ್

ಚಹಾ ಮಾರುತ್ತಿದ್ದ ಬಡ ಮಹಿಳೆ ಗ್ರಾ.ಪಂ. ಅಧ್ಯಕ್ಷೆಯಾಗಿ ಆಯ್ಕೆ..! ಅವಿರೋಧ ಆಯ್ಕೆಯ ಬಗ್ಗೆ ಆಕೆ ಹೇಳಿದ್ದೇನು?

195

ನ್ಯೂಸ್ ನಾಟೌಟ್ : ದೇವಾಲಯದ ಬಳಿ ಜೀವನೋಪಾಯಕ್ಕಾಗಿ ಒಂದು ಚಿಕ್ಕ ಟೀ.ಕಾಫಿ ಶಾಫ್ ನಡೆಸುತ್ತಿರುವ ಶ್ರೀಮತಿ ಅನ್ನಪೂರ್ಣಮ್ಮ ,ತಮ್ಮನ್ನು ಉರ್ಡಿಗೆರೆ ಗ್ರಾ.ಪಂ.ನ ಅಧ್ಯಕ್ಷರಾಗಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಆಯ್ಕೆ ಮಾಡಿದ ಘಟನೆ ತುಮಕೂರಿನ ಕರಿಗಿರಿ ಕ್ಷೇತ್ರವಾದ ದೇವರಾಯದುರ್ಗದಲ್ಲಿ ನಡೆದಿದೆ.
ಉರ್ಡಿಗೆರೆ ಗ್ರಾಮ ಪಂಚಾಯತ್ ಗೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ನಡೆದಿದ್ದು, ದೇವರಾಯದುರ್ಗ ದೇವಾಲಯದ ಬಳಿ ಚಹಾ ಅಂಗಡಿ ನಡೆಸುತ್ತಿರುವ ಅನ್ನಪೂರ್ಣಮ್ಮ.ಕೆ.ಎಸ್. ಎಂಬವರು ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.

ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದ ಉರ್ಡಿಗೆರೆ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ದೇವರಾಯನದುರ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆ.ಎಸ್.ಅನ್ನಪೂರ್ಣಮ್ಮ ಅರ್ಜಿ ಸಲ್ಲಿಸಿದ್ದರು. ಕ್ಯಾಟಗೆರಿ(ಬಿ)ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕೊಡಿಗೆಹಳ್ಳಿ ಕ್ಷೇತ್ರದ ಸುಗುಣಮ್ಮ ಅರ್ಜಿ ಸಲ್ಲಿಸಿದ್ದರು.
ಸಾಮಾನ್ಯರಲ್ಲಿ ಸಾಮಾನ್ಯಳಾದ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ನನ್ನ ಕೈಲಾದ ಸೇವೆಯನ್ನು ಜನರಿಗೆ ಉತ್ತಮ ಸೌಲಭ್ಯ ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಈ ಮೊದಲು ಉರ್ಡಿಗೆರೆ ಗ್ರಾ.ಪಂ.ಗೆ ಅಂತಹ ಆದಾಯವಿರಲಿಲ್ಲ.ಆದರೆ ಈಗ ವರ್ಷಕ್ಕೆ 15-20ಲಕ್ಷ ಅದಾಯ ಬರುವಂತೆ ಮಾಡಿದ್ದೇವೆ. ಆ ಹಣದಲ್ಲಿ ಉರ್ಡಿಗೆರೆ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಶಾಸಕರ ಸಹಕಾರದೊಂದಿಗೆ ಒಳ್ಳೆಯ ರಸ್ತೆ, ಕುಡಿಯುವ ನೀರು, ಶಾಲೆಗಳಿಗೆ ಸಂಪರ್ಕ ರಸ್ತೆ ಎಲ್ಲವನ್ನು ಮಾಡಬೇಕೆಂಬ ಹಂಬಲವಿದೆ ಎಂದರು.

ಈ ಭಾಗದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಾಗಿರುವ ಕಾರಣ ಬೇರೆಯವರು ನಾಮಪತ್ರ ಸಲ್ಲಿಸಿರಲಿಲ್ಲ. ಇದರಿಂದಾಗಿ ಅನ್ನಪೂರ್ಣಮ್ಮ ಅವರನ್ನು ಅಧ್ಯಕ್ಷರಾಗಿ, ಸುವರ್ಣಮ್ಮ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.

See also  ಚಿನ್ನದ ಸರ ದೋಚಿದ ಕಳ್ಳರ ಸೆರೆ ಹಿಡಿದ ಬೆಳ್ಳಾರೆ ಪೊಲೀಸರು, ಮಹಿಳೆಯ ಸರ ಅಪಹರಿಸಿದವರು ಸಿಕ್ಕಿ ಬಿದ್ದದ್ದು ಹೇಗೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget