ಬೆಂಗಳೂರು

16ನೇ ವಿವಾಹ ವಾರ್ಷಿಕೋತ್ಸವಕ್ಕೆ ಚಿನ್ನಾರಿಮುತ್ತನ ಭಾವುಕ ಬರಹ : ಪ್ರೀತಿಯ ಮಡದಿ ನೆನೆದು ಕಣ್ಣೀರಾದ ವಿಜಯ್​ ರಾಘವೇಂದ್ರ

146

ನ್ಯೂಸ್ ನಾಟೌಟ್ : ನಟ ವಿಜಯ ರಾಘವೇಂದ್ರ ಅವರ ಬದುಕಿನಲ್ಲಿ ಅನಿರೀಕ್ಷಿತವಾಗಿ ಅವರ ಮುದ್ದಿನ ಮಡದಿಯನ್ನು ಕಳೆದುಕೊಳ್ಳಬೇಕಾಯಿತು. ಬಹುಶಃ ಆ ಘಟನೆ ನಡೆದು ಹೋಗದೇ ಇರುತ್ತಿದ್ದರೆ ಇಂದು ಅವರ ಮನೆಯಲ್ಲಿ ಹಬ್ಬದ ಸಂಭ್ರಮವೇ ಮನೆ ಮಾಡುತ್ತಿತ್ತೆನೋ…

ಹೌದು,ಸ್ಪಂದನಾ ಅವರು ಬದುಕಿದ್ದರೆ ವಿಜಯ್​ ರಾಘವೇಂದ್ರ ಅವರು 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರು. ಪ್ರತಿವರ್ಷ ಮದುವೆ ದಿನದ ಹಬ್ಬವನ್ನು ಆಚರಿಸಿ ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಆದರೆ ದುರದೃಷ್ಟವಶಾತ್ ಅವರ ಮನೆಯಲ್ಲಿ ಸಂತೋಷ, ಸಂಭ್ರಮ ಎರಡು ಇಲ್ಲವಾಗಿದೆ.ವಿಜಯ್​ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ.ವಿಜಯ್ ಅವರಿಗೆ ಮಾತುಗಳೇ ಹೊರಡುತ್ತಿಲ್ಲ.

ಪ್ರೀತಿ ಮಡದಿ ತೀರಿಕೊಂಡ ಮೇಲೆ ವಿಜಯ್ ಮೌನಕ್ಕೆ ಶರಣಾಗಿದ್ದಾರೆ. ಯಾರ ಬಳಿಯೂ ವಿಜಯ್​ ಹೆಚ್ಚು ಮಾತನಾಡುತ್ತಿಲ್ಲ.ಅವರ ನೆನಪಲ್ಲೇ ದಿನ ಕೊರಗುತ್ತಿದ್ದಾರೆ.ಎಲ್ಲಿ ಹೋದರೂ ಅವರ ನೆನಪುಗಳೇ ಕಾಡುತ್ತಿವೆ. ಪತ್ನಿ ಸ್ಪಂದನಾ ನೆನಪಲ್ಲೇ ದಿನ ದೂಡುತ್ತಿರುವ ವಿಜಯ್​, ಮದುವೆಯ ವಾರ್ಷಿಕೋತ್ಸವದಂದು ಪತ್ನಿಯನ್ನು ನೆನೆದು ಕಣ್ಣೀರಾಕಿದ್ದಾರೆ. ಪ್ರೀತಿಯ ಮಡದಿಗಾಗಿ ಪ್ರೀತಿಯ ಸಾಲುಗಳನ್ನು ಒಳಗೊಂಡ ಪ್ರೇಮ ಪತ್ರವನ್ನು ಬರೆದು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/reel/CwZYJmtM0yV/?utm_source=ig_web_copy_link&igshid=MzRlODBiNWFlZA==

ಚಿನ್ನ.. ಇಣುಕು ನೋಟ ಬೀರಿ ಹೋದೇ ಬದುಕಿನ ಅಂಗಳದಲಿ
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ
ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬರೆತು ಜೀವಂತವಾದೆ
ಮುದ್ದಾದ ನಗುನಲ್ಲಿ ಇದ್ದ ನಗು ಪರ್ವತದಷ್ಟು..
ಮರೆಯದೇ… ತೊರೆಯದೇ… ಎದೆಗೊತ್ತಿ ಪ್ರೀತಿಸುವೆ, ಶೌರ್ಯದಲ್ಲಿ ನಾನು ಬಿಗಿದಪ್ಪುವಷ್ಟು

https://www.instagram.com/reel/CwZYJmtM0yV/?utm_source=ig_web_copy_link&igshid=MzRlODBiNWFlZA==

ಸ್ಪಂದನಾ ಅವರು ಆ.7ರಂದು ಥಾಯ್ಲೆಂಡ್​ ರಾಜಧಾನಿ ಬ್ಯಾಂಕಾಕ್​ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಅಂತ್ಯಕ್ರಿಯೆ ಆ.9ರಂದು ಈಡಿಗ ಸಂಪ್ರದಾಯದಂತೆ ಮಲ್ಲೇಶ್ವರಂ ಹರಿಶ್ಚಂದ್ರಘಾಟ್​ನಲ್ಲಿ ನೆರವೇರಿತು.

See also  ಸುಳ್ಯ: ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಎಎಪಿ ಅಭ್ಯರ್ಥಿಗಳಿಂದ ಮತದಾನ
  Ad Widget   Ad Widget     Ad Widget   Ad Widget   Ad Widget   Ad Widget