ಕ್ರೈಂ

ವೇಣೂರಿನಲ್ಲಿ ಅಪಘಾತ: ಚೆಂಬುಗ್ರಾಮದ ಚಟ್ಟೆಕಲ್ಲಿನ ಲಾರೆನ್ಸ್ ನಿಧನ

525

ನಾರಾವಿ: ಚೆಂಬು ಗ್ರಾಮದ ಊರುಬೈಲು ಚಟ್ಟೆಕಲ್ಲು ನಿವಾಸಿ ಲಾರೆನ್ಸ್ (39)ವರ್ಷ ಬೆಳ್ತಂಗಡಿ ತಾಲೂಕು ನಾರವಿ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ.

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದುದರಿಂದ ಸವಾರ ಲಾರೆನ್ಸ್ ಅಸುನೀಗಿದರು. ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಸವಾರ ಮ್ಯಾಥ್ಯು ಅಲ್ಪ ಪ್ರಮಾಣ ಗಾಯಗಳಿಂದ ಪಾರಾಗಿದ್ದಾರೆ. ಚೆಂಬು ಗ್ರಾಮದ ಜಾರ್ಜ್ ಮತ್ತು ಕೆತರಿನ ದಂಪತಿಗಳ ಪುತ್ರ ಲಾರೆನ್ಸ್ ನಾರಾವಿಯಲ್ಲಿ ರಬ್ಬರ್ ಮರ ಲೀಸ್ ಗೆ ತೆಗೆದುಕೊಂಡು ಬೆಳಗ್ಗೆ ಟ್ಯಾಪಿಂಗ್ ಗೆ ಹೋಗುತ್ತಿದ್ದಾಗ ಯಾವುದೊ ವಾಹನ ಒಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಲಾರೆನ್ಸ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

See also  ತನಿಖೆಗೆ ಹೆದರಿ ಚೈತ್ರಾ ಕುಂದಾಪುರ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಮನೆಯಲ್ಲಿ ಆಶ್ರಯ ಪಡೆದರಾ? ಹಿಂದೂ ಹೋರಾಟಗಾರ್ತಿ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್!
  Ad Widget   Ad Widget     Ad Widget   Ad Widget   Ad Widget   Ad Widget