ಕ್ರೈಂವೈರಲ್ ನ್ಯೂಸ್

“ಯಾರೋ ಕಿತ್ತೋದ್‌ ನನ್ಮಗ ಟಿವಿಯಲ್ಲಿ ತಗಲಾಕೊಂಡ” ..! ವರ್ತೂರು ಸಂತೋಷ್ ಹುಲಿ ಉಗುರಿನ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಜಗ್ಗೇಶ್..!

171

ನ್ಯೂಸ್ ನಾಟೌಟ್: ನವರಸ ನಾಯಕ ಜಗ್ಗೇಶ್ ಏನೇ ಹೇಳಬೇಕು ಅಂದರೂ ಓಪನ್ ಆಗಿ ಮಾತಾಡುತ್ತಾರೆ ಎಂಬ ಮಾತಿದೆ. ಇತ್ತೀಚೆಗೆ ಜಗ್ಗೇಶ್ ಹುಲಿ ಉಗುರು ವಿವಾದದಲ್ಲಿ ಸಿಕ್ಕಿಕೊಂಡಿದ್ದರು.

ಆ ವೇಳೆ ಜಗ್ಗೇಶ್ ಈ ಪ್ರಕರಣದ ಬಗ್ಗೆ ಓಪನ್ ಆಗಿ ಮಾತಾಡಿರಲಿಲ್ಲ. ಈಗ ಜಗ್ಗೇಶ್ ತಮ್ಮ ‘ರಂಗನಾಯಕ’ ಸಿನಿಮಾದ ಎರಡನೇ ಹಾಡನ್ನು ರಿಲೀಸ್ ಮಾಡುವ ವೇಳೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ‘ರಂಗನಾಯಕ’ ವೇದಿಕೆ ಮೇಲೆ ಜಗ್ಗೇಶ್ ಹುಲಿ ಉಗುರು ವಿವಾದ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿವರಣೆ ಕೊಟ್ಟಿದ್ದಾರೆ. ಜಗ್ಗೇಶ್ ಹುಲಿ ಉಗುರು ಕೊಟ್ಟಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು ಹುಲಿ ಉಗುರು ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆ ವಿಡಿಯೋ ವೈರಲ್ ಆಗಿತ್ತು.

ಅದನ್ನೇ ಇಟ್ಟುಕೊಂಡು ಜಗ್ಗೇಶ್ ಅವರ ಹುಲಿ ಉಗುರನ್ನು ವಶಕ್ಕೆ ಪಡೆದಿದ್ದರು. ಆ ವೇಳೆ ಜಗ್ಗೇಶ್ ಹುಲಿ ಉಗುರು ವಿವಾದದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು. ಆದರೆ, ಆ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರಲಿಲ್ಲ. ಈಗ ‘ರಂಗನಾಯಕ’ ವೇದಿಕೆ ಮೇಲೆ ಹುಲಿ ಉಗುರು ವಿವಾದ ಹಾಗೂ ವರ್ತೂರು ಸಂತೋಷ್ ಸಿಕ್ಕಿಕೊಂಡಿದ್ದರ ಬಗ್ಗೆ ಮಾತಾಡಿದ್ದಾರೆ.

ಜಗ್ಗೇಶ್ ಅಮ್ಮ ಮಗನಿಗೆ ಹುಲಿತರ ಬದುಕು ಅಂತ ಹುಲಿ ಉಗುರು ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ವರ್ತೂರು ಸಂತೋಷ್ ಸಿಕ್ಕಿಕೊಂಡಿದ್ದರಿಂದ ಇಷ್ಟೆಲ್ಲ ರಾದ್ಧಾಂತ ಆಯ್ತು ಎಂದು ಜಗ್ಗೇಶ್ ಪರೋಕ್ಷವಾಗಿ ಹೇಳಿದ್ದಾರೆ. “ನಾನು ನಮ್ಮ ತಾಯಿ ಅವರು ಮಗನೇ ಹುಲಿತರ ಬದುಕೋ ನೀನು ಅಂತ ಹುಲಿ ಉಗುರು ಕೊಟ್ಟಿದ್ದರು ಅಂತ ನಾನು ಹೆಮ್ಮೆಯಿಂದ ಹೇಳಿದೆ. ಅವನು ಯಾರೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹಾಕೊಂಡು, ಅದೇನೋ ಆಗಿ ಟಿವಿಯಲ್ಲಿ ತಗಲಾಕೊಂಡಿದ್ದಾನೆ. ಇಲ್ಲಿರೋ ಅಷ್ಟೂ ಕ್ಯಾಮರಾಗಳೂ ನನ್ನ ಮನೆ ಮುಂದೆ ಇತ್ತು.” ಎಂದು ನವರಸ ನಾಯಕ ಆದಿನವನ್ನು ನೆನಪಿಸಿಕೊಂಡಿದ್ದಾರೆ ಎನ್ನಲಾಗಿದೆ.

See also  ಮಡಿಕೇರಿ :ಆನೆ ದಂತದಿಂದ ಆಭರಣ..! ಮಾರಾಟಕ್ಕೆ ಯತ್ನಸಿದವರು ಪೊಲೀಸ್ ಬಲೆಗೆ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget