ಕ್ರೈಂರಾಜ್ಯವೈರಲ್ ನ್ಯೂಸ್

ಉತ್ತರ ಕನ್ನಡದ ಘಟ್ಟ ಪ್ರದೇಶಗಳಲ್ಲಿ ಭೂಕಂಪನ..! ಶಿರಸಿ ಮತ್ತು ಕುಮಟಾ ಭಾಗಗಳಲ್ಲಿ ನಡುಗಿದ ಭೂಮಿ..!

144

ನ್ಯೂಸ್ ನಾಟೌಟ್: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕುಮಟಾ ಭಾಗದ ಘಟ್ಟ ಪ್ರದೇಶದಲ್ಲಿ ಮೂರು ಸೆಕೆಂಡ್‌ ಗೂ ಹೆಚ್ಚಿನ ಸಮಯ ಭೂಕಂಪನದ ಅನುಭವವಾಗಿದೆ. ಇದರಿಂದ ಆ ಪ್ರದೇಶದ ಜನ ಭಯಭೀತರಾಗಿದ್ದರು.

ಕುಮಟಾ ತಾಲೂಕಿನ ದೇವಿಮನೆ ಘಟ್ಟ ಮತ್ತು ಶಿರಸಿ ತಾಲೂಕಿನ ಗ್ರಾಮವಾದ ರಾಗಿ ಹೊಸಳ್ಳಿ, ಕಸಗೆ, ಬಂಡಳ ಭಾಗದಲ್ಲಿ ಭೂಮಿ ಕಂಪಿಸಿದೆ. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ನಡೆಯುತ್ತಿದೆ. ಗುಡ್ಡ ಕೊರೆದು ರಸ್ತೆ ಮಾಡಲಾಗುತಿದ್ದು ಕಲ್ಲುಗಳನ್ನು ಸಿಡಿಸಿರಬಹುದು ಇದರಿಂದ ಕಂಪನ ಉಂಟಾಗಿದೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು. ಆದರೆ, ಇದು ನೈಸರ್ಗಿಕ ಭೂಕಂಪನ ಎಂದು ದೃಢಪಟ್ಟಿದೆ.

ಇದೇ ಸಮಯದಲ್ಲಿ ಹಿಂದೂ ಮಹಾಸಾಗರದಲ್ಲಿ 10 ಕಿ.ಮೀ ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂಕಂಪನವಾಗಿದೆ. ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.

Click

https://newsnotout.com/2024/12/fbi-director-indian-origin-kashyap-viral-news-donald-trump/
https://newsnotout.com/2024/12/gold-mining-in-china-worlds-largest-news-issue/
https://newsnotout.com/2024/12/tamilnadu-cyclone-kannada-news-3-nomore-video/
https://newsnotout.com/2024/12/kaalabhairav-kannada-news-viral-cigarate-police-investigation/
https://newsnotout.com/2024/12/cm-siddaramayya-kannada-news-1-lakh-rupees-fj/
https://newsnotout.com/2024/12/cyclone-issue-at-chennai-kannada-news-viral-video-air-india-landing/
See also  ಶಬರಿಮಲೆಯ ಪಂಬ ಸನ್ನಿಧಿಯಲ್ಲಿ ಬಂಟ್ವಾಳದ ಶಿಕ್ಷಕ ಸಾವು..! ಕುಸಿದು ಬಿದ್ದು ಮೃತ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget