ನ್ಯೂಸ್ ನಾಟೌಟ್: ಅಂಗನವಾಡಿ ಕೇಂದ್ರಗಳ ಊಟದ ಮೆನುವಿನಲ್ಲಿ ಮೊಟ್ಟೆ ಬಿರಿಯಾನಿ ಸೇರಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
“ಉಪ್ಪಿಟ್ಟುಬೇಡ, ಮೊಟ್ಟೆ ಬಿರಿಯಾನಿ ಬೇಕು’ ಎಂದು ಮಗುವೊಂದು ತಾಯಿಗೆ ಕೇಳಿದ ವೀಡಿಯೋ ಈ ಹಿಂದೆ ವೈರಲ್ ಆದ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಂಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಪ್ರಸ್ತುತ ಕೇರಳದ ಅಂಗನವಾಡಿಗಳಲ್ಲಿ ವಾರಕ್ಕೆ 2 ದಿನ ಮೊಟ್ಟೆ ನೀಡಲಾಗುತ್ತಿದೆ. ಒಂದು ತಿಂಗಳ ಹಿಂದೆ ಇದಕ್ಕೆ ನಿರ್ಧಾರ ಮಾಡಲಾಗಿತ್ತು, ಈಗ ಆದೇಶ ಮಾಡಲಾಗಿದೆ. ಇನ್ನು ಮುಂದೆ ಮೊಟ್ಟೆ ಬಿರಿಯಾನಿ ಯಾವ ದಿನಗಳಲ್ಲಿ ನೀಡಬೇಕು, ಅದರ ವ್ಯವಸ್ಥೆಗಳೇನು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ದೊರೆಯಬೇಕಿದೆ.