Latestನೆಲ್ಯಾಡಿ

ನೆಲ್ಯಾಡಿ: ಮರದ ದೊಣ್ಣೆಯಿಂದ ಹೊಡೆದು ಯುವಕನ ಹತ್ಯೆ ಪ್ರಕರಣ, ಆರೋಪಿಯನ್ನು ಬಂಧಿಸಿದ ಪೊಲೀಸರು

473

ನ್ಯೂಸ್‌ ನಾಟೌಟ್:  ನೆಲ್ಯಾಡಿ ಗ್ರಾಮದಲ್ಲಿ ಯುವಕನೋರ್ವನ ಹತ್ಯೆ ಘಟನೆಗೆ ಸಂಬಂಧ ಪಟ್ಟ ಹಾಗೆ ಆರೋಪಿಯನ್ನು ಬಂಧಿಸಿವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೆಲ್ಯಾಡಿಯ ಮಾದೇರಿ ಎಂಬಲ್ಲಿ ಶರತ್ ಕುಮಾರ್‌ (34) ನನ್ನು ಶುಕ್ರವಾರ(ಮೇ 9) ರಾತ್ರಿ ಮರದ ದೊಣ್ಣೆಯಿಂದ ಹೊಡೆದು ಕೊಲೆಗೈಯಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಹರಿಪ್ರಸಾದ್‌ನನ್ನು ಉಪ್ಪಿನಂಗಡಿ ಪೊಲೀಸರು ರವಿವಾರ(ಮೇ 11) ಬಂಧಿಸಿದ್ದಾರೆ.

ತನ್ನ ಚಿಕ್ಕಪ್ಪನ ಮನೆಯವರೊಡಗೂಡಿ ಸಂಗ್ರಹಿಸಿದ್ದ ಕಟ್ಟಿಗೆಯನ್ನು ತುಂಡರಿಸಿದ ವಿಚಾರಕ್ಕೆ ಸಂಬಂಧಿಸಿ ಚಿಕ್ಕಪ್ಪನ ಮನೆ ಮಂದಿ ಜತೆ ಸಂಘರ್ಷ ನಿರತನಾದ ಆತನನ್ನು ಹೊಡೆದು ಕೊಲ್ಲಲಾಗಿತ್ತು.ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಹರಿಪ್ರಸಾದ್‌ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

See also  ಕ್ಷಮೆ ಕೇಳದ ಕಮಲ್ ಹಾಸನ್ ಗೆ ‘ಥಗ್ ಲೈಫ್’ ಚಿತ್ರ ಬ್ಯಾನ್ ಬಿಸಿ..!ಚಿತ್ರ ಪ್ರದರ್ಶನ ಮಾಡದಂತೆ ಥಿಯೇಟರ್‌ಗಳಿಗೆ ಎಚ್ಚರಿಕೆ
  Ad Widget   Ad Widget     Ad Widget   Ad Widget   Ad Widget   Ad Widget