Uncategorized

ಉಪ್ಪಿನಂಗಡಿ: 14 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ..! ದೂರದ ಜಾರ್ಖಂಡ್ ನಿಂದ ದುಡಿಯಲು ಬಂದಿದ್ದ ಬಡ ಕುಟುಂಬಕ್ಕೆ ಶಾಕ್..!

ನ್ಯೂಸ್ ನಾಟೌಟ್: ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಜಾರ್ಖಂಡ್ ಮೂಲದ ಕುಟುಂಬ ಉಪ್ಪಿನಂಗಡಿಗೆ ಬಂದಿತ್ತು. ಆ ಕುಟುಂಬದಲ್ಲಿ 14ರ ಹರೆಯದ ಬಾಲಕಿ ನೀಲಮ್‌ ಕುಮಾರ್‌ ತಾಯಿಯ ಮೇಲೆ ಮೊಬೈಲ್ ವಿಚಾರಕ್ಕೆ ಕೋಪ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆದಿತ್ಯವಾರ(ಆ.18) ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿಯ ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿ ಈ ಘಟನೆ ನಡೆದಿದೆ.

ಜಾರ್ಖಂಡ್ ನ‌ ಸರ್ಜು ಬುಯ್ಯಾನ್‌ ಪತ್ನಿ, ಮಗಳೊಂದಿಗೆ ವಾರದ ಹಿಂದೆ ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಜಗದೀಶ್‌ ಸರಳಾಯ ಎಂಬವರ ತೋಟದ ಕೆಲಸಕ್ಕೆ ಆಗಮಿಸಿದ್ದರು. ರವಿವಾರ ರಾತ್ರಿ 7.30ರ ಸುಮಾರಿಗೆ ತೋಟದ ಮಾಲಕರು ಕೊಟ್ಟಿದ್ದ ವಾಸ್ತವ್ಯದ ಕೋಣೆಯಲ್ಲಿ ನೀಲಮ್‌ ಕುಮಾರಿಯು ಮೊಬೈಲ್‌ನಲ್ಲಿ ಸಂಬಂಧಿಕರೊಂದಿಗೆ ವೀಡಿಯೋ ಕರೆ ಮಾಡುತ್ತಿದ್ದುದ್ದನ್ನು ತಾಯಿ ವಿರೋಧಿಸಿದ್ದಾರೆ. ಮೊಬೈಲ್‌ ಕಿತ್ತುಕೊಂಡು ಬೈದಿದ್ದಾರೆ ಎನ್ನಲಾಗಿದೆ. ಕೋಪಿಸಿಕೊಂಡ ಬಾಲಕಿ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click

https://newsnotout.com/2024/08/puttur-wild-wild-boar-animal-kannada-news-scooter-driver/
https://newsnotout.com/2024/08/bengaluru-lady-case-under-twist-kannada-news-fir/
https://newsnotout.com/2024/08/duplicate-currency-note-kannada-news-youtube-puttur-mangaluru/

Related posts

70 ವರ್ಷದ ಅಜ್ಜಿಯನ್ನು ವಿವಾಹವಾದ 37 ವರ್ಷದ ಯುವಕ !

ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ: ಹೈಕೋರ್ಟ್ ಗರಂ

ಪ್ರಧಾನಿ ಮೋದಿ ಬಂದ ಬಳಿಕ ಡಬ್ಬಲ್ ಆಯ್ತು ಬಂಡೀಪುರದ ಆದಾಯ..!ಆದಾಯದಲ್ಲಿ ರಾಜ್ಯದಲ್ಲಿಯೇ ನಂಬರ್ ಓನ್..!