ಕರಾವಳಿ

ಭಿನ್ನ ಕೋಮಿನ ಯುವಕ-ಯುವತಿಯರ ತಂಡ ತಡರಾತ್ರಿ ವಿಹಾರ,ಪೊಲೀಸರು ದಾಳಿ ಮಾಡುತ್ತಲೇ ಬೈಕ್ ಬಿಟ್ಟು ಯುವಕರು ಪರಾರಿ

ನ್ಯೂಸ್ ನಾಟೌಟ್ : ಯುವತಿಯರಿಬ್ಬರ ಜತೆ ಭಿನ್ನ ಕೋಮಿನ ಮೂವರು ಯುವಕರ ತಂಡ ತಡರಾತ್ರಿ ನೇತ್ರಾವತಿ ನದಿ ತೀರದಲ್ಲಿ ವಿಹಾರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.ಈ ಕುರಿತು ಹಿಂದೂ ಪರ ಸಂಘಟನೆ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಬಂಟ್ವಾಳ ತಾಲೂಕಿನ ಪೆರ್ನೆಯ ಬಿಳಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಫೆ 3 ರಂದು ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ಅಂಗಡಿಯೊಂದರ ಬಳಿ ಕೆಲ ಮುಸ್ಲಿಂ ಸಮುದಾಯದ ಹುಡುಗರೊಂದಿಗೆ ಯುವತಿಯರಿಬ್ಬರು  ಮಾತನಾಡಿಕೊಂಡಿದ್ದರು .   ಓರ್ವ ಮುಸ್ಲಿಂ ಹಾಗೂ ಓರ್ವ ಹಿಂದೂ ಯುವತಿ ಮಂಗಳೂರು ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಇಲ್ಲಿಗೆ ಬಂದಿದ್ದಾರೆ. ಕೆಲ ಹೊತ್ತಿನ ಬಳಿಕ ಯುವಕ ಹಾಗೂ ಯುವತಿಯರು ಜತೆಯಾಗಿ  ಬಿಳಿಯೂರು ಬಳಿ ನೇತ್ರಾವತಿ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ  ಬಳಿ ತೆರಳಿದ್ದಾರೆ. ಇವರನ್ನು  ಸಂಘಟನೆಯ ಯುವಕರು  ಹಿಂಬಾಲಿಸಿದ್ದರು ಎನ್ನಲಾಗಿದ್ದು  ಅಲ್ಲದೇ ಅವರು ಪೊಲೀಸರಿಗೂ ಮಾಹಿತಿ ರವಾನಿಸಿದರು.

ಪೊಲೀಸರ ಹಾಗೂ ಯುವಕರ ಗುಂಪು ತಮ್ಮ ಬಳಿ ಬರುತ್ತಿದ್ದಂತೆ  ಯುವಕರು ಓಡಿ ಪರಾರಿಯಾಗಿದ್ದಾರೆ. ವೇಳೆ ತಂದಿದ್ದ ಬೈಕನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ.ಅಲ್ಲಿದ್ದ ಯುವತಿಯರಿಬ್ಬರನ್ನು  ಸ್ಥಳದಲ್ಲಿದ್ದ ಮೂರು ಆಕ್ಟಿವಾ ಹಾಗೂ ಒಂದು ಬೈಕ್ ,ಕೆಲವೊಂದು ಪ್ಯಾಕೇಟ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು.

ಸದ್ಯ ಈ ಬಗ್ಗೆ ಸ್ಥಳೀಯರ ಆರೋಪಿಸುವುದೇನೆಂದರೆ ಮಾದಕ ದ್ರವ್ಯ ಸೇವಿಸಿ ಮೋಜು ಮಸ್ತಿ ಮಾಡುವ ಉದ್ದೇಶದಿಂದ ಅಲ್ಲಿ ಯುವಕ ಯುವತಿಯರು ಗುಂಪು ಸೇರಿದ್ದಾರೆ ಎಂದಿದ್ದಾರೆ. ಈ ಹೇಳಿಕೆಯ ಮೇರೆಗೆ ಅವರನ್ನು ದೇರಳಕಟ್ಟೆಯ ಮೆಡಿಕಲ್ ಸೆಂಟರ್ಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಯಿತು ಎಂದು ತಿಳಿದು ಬಂದಿದೆ. ಅಲ್ಲಿ ನೆಗೆಟಿವ್ ರಿಪೋರ್ಟ್ ಬಂದಿರುವುದಾಗಿ ತಿಳಿದು ಬಂದಿದೆ. ಬಳಿಕ ಯುವತಿಯರನ್ನು ಬಿಟ್ಟು ಕಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Related posts

ಕಲ್ಲುಗುಂಡಿ: ಸ್ವಚ್ಛತೆ ಕಾಪಾಡದ ಹೋಟೆಲ್ ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ದಿಢೀರ್ ದಾಳಿ, ಹಲವು ಹೋಟೆಲ್ ಮಾಲೀಕರಿಗೆ ದಂಡದ ಬಿಸಿ

ಗೂನಡ್ಕ: ಕಮರಿಗೆ ಉರುಳಿದ ಪೂರ್ಣಿಮಾ ಬಸ್

ಕರ್ನಾಟಕದ ಹಲವು ಆರ್.​ಟಿ.ಓ ಗಳ ಮೇಲೆ ಲೋಕಾಯುಕ್ತ ದಾಳಿ..! ಚೆಕ್ ಪೋಸ್ಟ್​​ ಸಿಬ್ಬಂದಿ ವಿರುದ್ಧ ಹಲವು ಭ್ರಷ್ಟಾಚಾರ ಆರೋಪ..!