ಕ್ರೈಂ

ಕಾಣೆಯಾಗಿದ್ದ ಯುವತಿ ದಿಢೀರ್ ಪ್ರತ್ಯಕ್ಷ, ಪ್ರಕರಣ ಸುಖಾಂತ್ಯ

ಉಜಿರೆ: ಉಡುಪಿಯೊಂದರ ಮಾರುತಿ ಶೋ ರೂಂ ನಲ್ಲಿ ಕಾರ್ಯನಿರ್ವಹಿಸುತ್ತದ್ದ, ಉಜಿರೆ ಗ್ರಾಮದ ಎರ್ನೋಡಿ ರೆಂಜಾಳದ ಯುವತಿ ಕಾಣೆಯಾಗಿದ್ದ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ.

ಯುವತಿ ಎ.18 ರಂದು ಸಂಜೆ ವೇಳೆ ಮನೆಗೆ ವಾಪಾಸ್ಸಾಗಿದ್ದು ತನ್ನ ವೈಯಕ್ತಿಕ ಕಾರಣಗಳಿಂದ ಮನನೊಂದು ಉಡುಪಿಯ ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾಳೆ . ಉಡುಪಿಯ ಮಾರುತಿ ಶೋ ರೂಂವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ವರ್ಕ್ ಫ್ರಮ್ ಹೋಮ್ ಎಂದು ಮನೆಯಲ್ಲಿ ಕೆಲಸ ಮಾಡಿಕೊಂಡು 15 ದಿನಗಳಿಗೊಮ್ಮೆ ಉಡುಪಿಗೆ ಹೋಗಿ ಬರುತ್ತಿದ್ದಳು. ಎ.11 ರಂದು ಬೆಳಿಗ್ಗೆ 8.30 ರ ಸುಮಾರಿಗೆ ಉಡುಪಿಗೆಂದು ಮನೆಯಿಂದ ಹೋದವಳು ಬಜಗೊಳಿಯ ತನ್ನ ಚಿಕ್ಕಮ್ಮನ ಮನೆಯಲ್ಲಿ 3-4 ದಿನ ಉಳಿದುಕೊಂಡಿದ್ದಳು. ಎ.15 ರಂದು ಬೆಳಗ್ಗೆ ಸುಮಾರು 7.30 ಕ್ಕೆ ಬಜಗೊಳಿಯ ತನ್ನ ಚಿಕ್ಕಮ್ಮನ ಮನೆಯಿಂದು ಕುಂದಾಪುರಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಫೋನ್ ಕರೆಗೂ ಸಿಗದೇ ಆತಂಕಕ್ಕೆ ಕಾರಣವಾಗಿದ್ದಳು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Related posts

ತಮಿಳುನಾಡು: 17 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ ಲೈಂಗಿಕವಾಗಿ ಬಳಸಿಕೊಂಡ ಮಹಿಳೆ..! ಆಕೆಯನ್ನು ಹಿಡಿದ ಪೊಲೀಸರ ಕಾರ್ಯಚರಣೆ ಹೇಗಿತ್ತು..?

ಸರ್ಕಾರಿ ಜಾಗಕ್ಕೆ ರಾತ್ರೋ ರಾತ್ರಿ ಮಾರಾಮಾರಿ..! 50 ಮಂದಿಯ ಮೇಲೆ ದೂರು ದಾಖಲು, ಗ್ರಾಮದಲ್ಲಿ ಪೊಲೀಸರ ಸರ್ಪಗಾವಲು..! ದೇಗುಲದ ಸುತ್ತ ಏನಿದು ವಿವಾದ..?

ರಷ್ಯಾದಲ್ಲಿ ಕ್ರೈಸ್ತ, ಯಹೂದಿ ಪ್ರಾರ್ಥನಾ ಮಂದಿರಗಳ ಮೇಲೆ ಉಗ್ರರ ಭೀಕರ ದಾಳಿ..! 16 ಜನರನ್ನು ಕೊಂದಿದ್ದ 6 ಉಗ್ರರನ್ನು ಹತ್ಯೆ ಮಾಡಿದ ರಷ್ಯಾ..!