ಉಡುಪಿಕರಾವಳಿಕಾಸರಗೋಡುಕ್ರೈಂದೇಶ-ವಿದೇಶವೈರಲ್ ನ್ಯೂಸ್

ಉಡುಪಿ: ಹೋಟೆಲ್ ಕಾರ್ಮಿಕನನ್ನು ಬಿಯರ್ ಬಾಟಲಿಯ ಚೂರಿನಿಂದ ಕುತ್ತಿಗೆ ಕೊಯ್ದು ಕೊಲೆ..! ಕಾಸರಗೋಡಿನ ಯುವಕನ ದುರಂತ ಅಂತ್ಯ..!

ನ್ಯೂಸ್ ನಾಟೌಟ್ : ಹೋಟೆಲ್ ಕಾರ್ಮಿಕರೊಬ್ಬರನ್ನು ಬಿಯರ್ ಬಾಟಲಿಯ ಚೂರಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಉಡುಪಿಯ ಮಣಿಪಾಲದ ಈಶ್ವರನಗರ ಸಮೀಪ ಇಂದು(ಡಿ.6) ಬೆಳಗ್ಗೆ ನಡೆದಿದೆ.

ಮೃತರನ್ನು ಕಾಸರಗೋಡಿನ ಶ್ರೀಧರ್ ನಾಯಕ(35) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದು, ಇವರ ಕುತ್ತಿಗೆಯನ್ನು ಬಿಯರ್ ಬಾಟಲಿಯಿಂದ ಕೊಯ್ದು ಹತ್ಯೆ ಮಾಡಿರುವುದು ತಿಳಿದುಬಂದಿದೆ. ಕೊಲೆ ಯಾವ ಕಾರಣಕ್ಕೆ ನಡೆದಿದೆ ಮತ್ತು ಯಾರು ಮಾಡಿದ್ದಾರೆ ಎಂಬುದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ ಅರುಣ್, ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

B.Ed ಪದವೀಧರರು ‘ಪ್ರಾಥಮಿಕ ಶಾಲಾ ಶಿಕ್ಷಕ’ರ ಹುದ್ದೆಗೆ ಅರ್ಹರಲ್ಲ ಎಂದಿದ್ದೇಕೆ ಸುಪ್ರೀಂ ಕೋರ್ಟ್? ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನಲ್ಲೇನಿದೆ?

ವಿಟ್ಲ: ಶಾಲೆಗೆ ನುಗ್ಗಿದ ಕಿಡಿಗೇಡಿಗಳಿಂದ ಸ್ವತ್ತುಗಳಿಗೆ ಹಾನಿ, ಗೋಡೆಯಲ್ಲಿ ಅಶ್ಲೀಲ ಬರಹ..!, ಈ ಶಾಲೆಯ ಬಗ್ಗೆ ಅಷ್ಟೊಂದು ಕೋಪವೇಕೆ..?

ಸುಬ್ರಹ್ಮಣ್ಯ: ಭಾರಿ ಮಳೆಗೆ ಸ್ನಾನಘಟ್ಟ ಮುಳುಗಡೆ, ನೀರಿನ ಮಟ್ಟ ಹೆಚ್ಚಳಗೊಂಡರೂ ನದಿಗೆ ಸ್ನಾನಕ್ಕಿಳಿಯುವ ಯಾತ್ರಾರ್ಥಿಗಳು..!