ಉಡುಪಿಕರಾವಳಿ

ಉಡುಪಿ: ಮಂಗಳೂರು ಎಕ್ಸ್‌ ಪ್ರೆಸ್‌ ರೈಲಿನಲ್ಲಿ 63 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..! ದೂರು ದಾಖಲು

139

ನ್ಯೂಸ್‌ ನಾಟೌಟ್‌: ಮುಂಬೈನಿಂದ ಉಡುಪಿಗೆ ಮಂಗಳೂರು ಎಕ್ಸ್‌ ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು 63 ಲಕ್ಷ ರೂಪಾಯಿ ಮೌಲ್ಯದ 900 ಗ್ರಾಂ ಚಿನ್ನಾಭರಣಗಳನ್ನು ಕಳೆದುಕೊಂಡಿದೆ.

ಮುಂಬೈನ ನಿವಾಸಿ ಅವಿನಾಶ್ ಈ ಸಂಬಂಧ ದೂರು ನೀಡಿದ್ದಾರೆ.

“ನವೆಂಬರ್ 15ರಂದು ತನ್ನ ಕುಟುಂಬದೊಂದಿಗೆ ಮುಂಬೈನಿಂದ ಸಿ.ಎಸ್‌.ಟಿ ಮಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12133, ಕೋಚ್ ನಂ ಎಸ್ 3) ನಲ್ಲಿ ಪ್ರಯಾಣಿಸಿದ್ದೆವು. ಬಟ್ಟೆ ಮತ್ತು ಚಿನ್ನಾಭರಣಗಳಿದ್ದ ನಾಲ್ಕು ಸೂಟ್‌ ಕೇಸ್‌ ಗಳನ್ನು ತೆಗೆದುಕೊಂಡು ಹೋಗಿದ್ದು ಅದನ್ನು ಸೀಟಿನ ಕೆಳಗೆ ಇಟ್ಟಿದ್ದೆವು. ನವೆಂಬರ್ 16ರಂದು ಇಂದ್ರಾಳಿ ರೈಲು ನಿಲ್ದಾಣಕ್ಕೆ ತೆರಳಿದ್ದೆವು. ಬಳಿಕ ಮನೆಗೆ ಹಿಂತಿರುಗಿ ಸಂಜೆ ಸೂಟ್‌ ಕೇಸ್‌ ಗಳನ್ನು ತೆರೆದಾಗ ಎರಡು ಸೂಟ್‌ ಕೇಸ್‌ ಗಳಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಬಿ.ಎನ್‌.ಎಸ್ ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Click

https://newsnotout.com/2024/11/bpl-cacellation-process-and-trasfer-to-apl-kannada-news-d/
https://newsnotout.com/2024/11/bjp-and-congress-viral-news-praghallad-joshi-v/
https://newsnotout.com/2024/11/mangaluru-ullala-3-girls-issue-manager-and-owner-arrested-kananda-news-d/
https://newsnotout.com/2024/11/lady-make-a-complaint-on-man-who-met-in-dating-app-kannad-anews-d/
https://newsnotout.com/2024/11/children-cyber-crime-kannada-news-viral-news-police-investigation/

See also  ಮುಸ್ಲಿಂ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ..! 3 ವರ್ಷದ ಮಗನ ಆಸೆ ಈಡೇರಿಸಿ ಭಾವೈಕ್ಯತೆ ಮೆರೆದ ತಂದೆ-ತಾಯಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget