Latestಉಡುಪಿಉಡುಪಿಕರಾವಳಿಕ್ರೈಂ

ಉಡುಪಿಗೆ ಬಂದ ಭೂಗತ ಪಾತಕಿ ಬನ್ನಂಜೆ ರಾಜಾ..! 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವಾತನಿಗೆ 12 ದಿನ ಪೆರೋಲ್ ರಜೆ..!

961

ನ್ಯೂಸ್ ನಾಟೌಟ್: ತಂದೆ ಸುಂದರ ಶೆಟ್ಟಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಬೇಕೆಂದು, ಹೈಕೋರ್ಟ್‌ಗೆ ಪೆರೋಲ್ ಅರ್ಜಿ ಸಲ್ಲಿಸಿದ್ದ. ಕೋಟ್ ಪೆರೋಲ್ ನೀಡಿದ್ದು, ಬಿಗಿ ಪೊಲೀಸ್ ಭದ್ರತೆಯಲ್ಲಿ ಬನ್ನಂಜೆ ರಾಜಾನನ್ನು ಉಡುಪಿಗೆ ಕರೆತರಲಾಗಿದೆ. ತಂದೆಯ ಅಂತ್ಯಸಂಸ್ಕಾರ ಮತ್ತು ಅಪರಕ್ರಿಯೆ ನಡೆಸಲಿದ್ದಾನೆ.

ಬನ್ನಂಜೆ ರಾಜಾ ಒಟ್ಟು 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಈತನನ್ನು ಬೆಳಗಾವಿ ಹಿಂಡಲಗಾ ಜೈಲಿನಲ್ಲಿರಿಸಲಾಗಿದೆ.

ಈ ಕುರಿತು ಮಾತನಾಡಿರುವ ಉಡುಪಿ ಎಸ್‌ ಪಿ ಡಾ. ಅರುಣ್ ಕುಮಾರ್, ಇತ್ತೀಚೆಗೆ ಬನ್ನಂಜೆ ರಾಜಾನ ತಂದೆ ಮೃತಪಟ್ಟಿದ್ದಾರೆ. ಬೆಳಗಾವಿ ಜೈಲಿನಿಂದ ಹೈಕೋರ್ಟ್ ಗೆ ಪೆರೋಲ್‌ ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಪೆರೋಲ್ ನೀಡಿದೆ.

ಮೇ 3 ರಿಂ 14ನೇ ತಾರೀಖಿನವರೆಗೆ ಪೆರೋಲ್ ರಜೆ ನೀಡಲಾಗಿದೆ. ಸಹಚರರ ಜೊತೆ ಯಾವುದೇ ಕೃತ್ಯದಲ್ಲಿ ಭಾಗಿಯಾಗುವಂತಿಲ್ಲ. ಮೊಬೈಲ್, ಇಂಟರ್ನೆಟ್ ಬಳಸುವಂತಿಲ್ಲ. ಮನೆಯನ್ನು ಬಿಟ್ಟು ಹೊರಗೆ ಬರುವಂತಿಲ್ಲ. ಬನ್ನಂಜೆ ರಾಜಾ ಅಂತ್ಯಸಂಸ್ಕಾರದಲ್ಲಿ ಮಾತ್ರ ಭಾಗಿಯಾಗಬೇಕು ಎಂದು ಷರತ್ತು ವಿಧಿಸಲಾಗಿದೆ. ಮೇ 14 ರಂದು ಮತ್ತೆ ಬೆಳಗಾವಿಗೆ ಆತನನ್ನು ಶಿಫ್ಟ್ ಮಾಡುತ್ತೇವೆ ಎಂದು ಎಸ್.ಪಿ ತಿಳಿಸಿದ್ದಾರೆ.

ತಾನು ಅಕ್ರಮ ಸಂಬಂಧ ಹೊಂದಿದ್ದವನೊಂದಿಗೆ ಬಲವಂತವಾಗಿ ಮಗಳನ್ನು ಮದುವೆ ಮಾಡಿಸಿದ ತಾಯಿ..! ಯುವತಿ ನೇಣಿಗೆ ಶರಣು..!

ಪಾಕ್‌ ಗೆ ಭಾರತದ ಸೇನಾ ಮಾಹಿತಿ ರವಾನಿಸುತ್ತಿದ್ದ ಇಬ್ಬರು ಅರೆಸ್ಟ್‌..! ಆರೋಪಿಗಳು ಅಮೃತಸರ ಕೇಂದ್ರ ಜೈಲಿಗೆ..!

See also  ಏಪ್ರಿಲ್​ 28, 29 ರಂದು ಮಗದೊಮ್ಮೆ ಪ್ರಧಾನಿ ಕರ್ನಾಟಕ ಭೇಟಿ, ಉತ್ತರ ಕರ್ನಾಟಕದಲ್ಲಿ ಬಿರುಸಿನ ತಯಾರಿ
  Ad Widget   Ad Widget     Ad Widget   Ad Widget   Ad Widget   Ad Widget