ನ್ಯೂಸ್ ನಾಟೌಟ್ : ತುಳುನಾಡಿನ ಕಾರಣಿಕ ದೈವಗಳಲ್ಲಿ ಒಂದಾದ ಕೊರಗಜ್ಜನ ಕಟ್ಟೆಯಿಂದಲೇ ಕಳವು ಮಾಡಿರುವ ಘಟನೆ (ಮೇ. 29 ರ ರಾತ್ರಿ) ಬಗ್ಗೆ ವರದಿಯಾಗಿದೆ. ಸುಳ್ಯದ ಗುತ್ತಿಗಾರಿನ ಚತ್ರಪ್ಪಾಡಿ ಕೊರಗಜ್ಜನ ಕಟ್ಟೆಯಲ್ಲಿ ಈ ಘಟನೆ ನಡೆದಿದೆ.
ರಾತ್ರಿ ವೇಳೆ ಯಾರೋ ಕಳ್ಳರು ಬಂದು ಬೆಳ್ಳಿ ಮುಟ್ಟಾಳೆ ಮತ್ತು ತಾಮ್ರದ ಮುಟ್ಟಾಳೆ ಕಳವು ಮಾಡಿರುವುದಾಗಿ ತಿಳಿದು ಬಂದಿದೆ.ಈ ಬಗ್ಗೆ ಕೊರಗಜ್ಜ ಸನ್ನಿದಾನದ ಆಡಳಿತ ಮಂಡಳಿ ಸದಸ್ಯರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.