ಚಿಕ್ಕಮಗಳೂರು

ಚಾರಣಕ್ಕೆ ಬಂದವರ ಮೇಲೆ ವರುಣನ ಅಬ್ಬರ, ಮರ ಬಿದ್ದು ಹೊಸ ಕಾರು ಜಖಂ..!

191

ನ್ಯೂಸ್‌ ನಾಟೌಟ್‌: ಕಳೆದ ಎರಡು ದಿನಗಳಿಂದ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ವರುಣ ಅಬ್ಬರಕ್ಕೆ ಅಪಾರ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಕಾಲಬೈರವೇಶ್ವರ ದೇವಸ್ಥಾನದ ಬಳಿ ನಿಲ್ಲಿಸಿದ ಕಾರಿನ ಮೇಲೆ ಮರ ಬಿದ್ದು ಹೊಸ ಕಾರೊಂದು ಜಖಂಗೊಂಡಿದೆ. ಅದೃಷ್ಟವಶಾತ್‌ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಸಾವು-ನೋವು ಸಂಭವಿಸಿಲ್ಲ ಆದರೆ ಕಾರು ಮಾತ್ರ ಜಖಂಗೊಂಡಿದೆ.

ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಮರ ಬಿದ್ದು ಹೊಸ ಬಲೆನೋ ಕಾರು ಜಖಂಗೊಂಡಿದೆ. ಬೆಂಗಳೂರು ಮೂಲದ ಯುವಕರ ತಂಡವೊಂದು ಬೆಂಡಾಜೆ ಬೆಟ್ಟಕ್ಕೆ ಚಾರಣಕ್ಕೆಂದು ಇಲ್ಲಿಗೆ ಆಗಮಿಸಿದ್ದರು. ಅದರಂತೆ ದುರ್ಗದಹಳ್ಳಿ ಕಾಲಬೈರವೇಶ್ವರ ದೇವಸ್ಥಾನದ ಬಳಿ ಕಾರು ನಿಲ್ಲಿಸಿ ಚಾರಣಕ್ಕೆ ತೆರಳಿದ್ದರು. ಪಾರ್ಕಿಂಗ್‌ ಮಾಡಿದ ಸ್ಥಳದಿಂದ ಬೆಂಡಾಜೆ ಬೆಟ್ಟಕ್ಕೆ 10 ಕಿ.ಮೀ. ದೂರವಿದೆ. ಆದರೆ ಚಾರಣಕ್ಕೆ ಹೋದವರಿಗೆ ತಮ್ಮ ಕಾರು ಜಖಂಗೊಂಡ ವಿಚಾರ ಮಾತ್ರ ಗೊತ್ತಾದದ್ದು ಚಾರಣ ಮುಗಿಸಿ ಬಂದ ಮೇಲೆಯೇ..!

See also  ಡೆಂಗ್ಯೂಗೆ 6 ವರ್ಷದ ಬಾಲಕಿ ದುರಂತ ಅಂತ್ಯ..! 4 ಲಕ್ಷ ರೂ. ಖರ್ಚು ಮಾಡಿದ್ರು ಉಳಿಸಿಕೊಳ್ಳಲಾಗಲಿಲ್ಲ ಎಂದು ತಂದೆ ಕಣ್ಣೀರು..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget