ಬೆಂಗಳೂರುವೈರಲ್ ನ್ಯೂಸ್

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕೊಡೋರಿಗೆ ಸರ್ಕಾರದಿಂದ ಗುಡ್ ನ್ಯೂಸ್ ..ಪರಿಹಾರ ಕೊಟ್ರೆ ಜನರಿಗೆ ಸಿಗುತ್ತೆ ಈ ಭಾಗ್ಯ..? ನೀವೂ ಟ್ರೈ ಮಾಡಿ..!

180

ನ್ಯೂಸ್ ನಾಟೌಟ್: ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ ಟ್ರಾಫಿಕ್ ನದ್ದೇ ದೊಡ್ಡ ಕಿರಿಕಿರಿ. ಟ್ರಾಫಿಕ್​​​ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ..

ಸರ್ಕಾರದ ಎಲ್ಲಾ ಕ್ರಮಗಳು ಕೇವಲ ತಾತ್ಕಲಿಕ ಪರಿಹಾರವಷ್ಟೇ ಆಗುತ್ತಿದೆ. ಟ್ರಾಫಿಕ್‌ನಿಂದಾಗಿ ಬೆಂಗಳೂರಿನ ಮೈಸೂರು ರೋಡ್​​, ಎಲೆಕ್ಟ್ರಾನಿಕ್​ ಸಿಟಿ, ಮಹದೇವ ಪುರ, ವೈಟ್ ಫೀಲ್ಡ್, ಮಾರತ್ ಹಳ್ಳಿ, ವರ್ತೂರು, ಸಿಲ್ಕ್ ಬೋರ್ಡ್‌ ಸೇರಿದಂತೆ ಹಲವು ಕಡೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಬಾರಿ ಸುದ್ದಿಯಾಗುತ್ತಿದೆ. ಈ ಬೆನ್ನಲ್ಲೇ ಸರ್ಕಾರ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕೊಡೋರಿಗೆ ಗುಡ್ ನ್ಯೂಸ್ ಕೊಟ್ಟಿದೆ.ಪರಿಹಾರ ಕೊಟ್ರೆ ಜನರಿಗೆ ಸಿಗುತ್ತೆ ಈ ಭಾಗ್ಯನೂ ಕೊಡ್ತೀವಿ ಎಂದು ಹೇಳಿದೆ.

ಸದ್ಯ ಈ ಟ್ರಾಫಿಕ್​​​ ಎಂಬ ಭೂತಕ್ಕೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮಾಸ್ಟರ್​​ ಪ್ಲಾನ್​​ ಒಂದು ಹಾಕಿದೆ. ಟ್ರಾಫಿಕ್​ ಸಮಸ್ಯೆಗೆ ಪರಿಹಾರ ಕೊಡಿ, ಪೊಲೀಸರ ಜತೆ ಕಾಫಿ ಕುಡಿಯಿರಿ ಎಂಬ ಹೊಸ ಕ್ಯಾಂಪೇನ್​​​ ಬೆಂಗಳೂರು ಟ್ರಾಫಿಕ್​​ ಪೊಲೀಸ್ರು ಶುರು ಮಾಡಿದ್ದಾರೆ. ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಬೆಂಗಳೂರು ಟ್ರಾಫಿಕ್​ ಪೊಲೀಸ್ರು ಶುರು ಮಾಡಿರೋ ಈ ಕ್ಯಾಂಪೇನ್​​ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಜನ ಕೂಡ ಸಖತ್​​ ಹ್ಯೂಮರಸ್​ ಆಗಿ ಉತ್ತರ ಕೊಡುತ್ತಿದ್ದಾರೆ. ರಾಜಧಾನಿ ಬೆಂಗಳೂರು ಟ್ರಾಫಿಕ್​​​ಗೆ ಕಾರಣವೇನು? ಈ ಸಮಸ್ಯೆಗೆ ಪರಿಹಾರವೇನು? ಎಂದು ಪೊಲೀಸ್ರು ಪ್ರಶ್ನೆ ಕೇಳಿದ್ದು, ಸರಿಯಾದ ಉತ್ತರ ಕೊಟ್ಟವರಿಗೆ ರಾಜಾತಿಥ್ಯ ಆಫರ್​ ಕೊಡಲಾಗಿದೆ. ಬೆಂಗಳೂರು ಟ್ರಾಫಿಕ್​ ಪೊಲೀಸರು ಕೇಳಿದ ಪ್ರಶ್ನೆಗೆ ನೆಟ್ಟಿಗರು ವಿಭಿನ್ನ ಉತ್ತರಗಳನ್ನು ನೀಡಿದ್ದಾರೆ.

See also  ಪತ್ನಿ ಮನೆ ಬಿಟ್ಟು ಹೋಗುತ್ತಿರುವ ಕೋಪಕ್ಕೆ ಕಾರಿನಿಂದ ಗುದ್ದಿಸಿದ ಪತಿ..! ಭೀಕರ ಹಲ್ಲೆಯ ದೃಶ್ಯ ವೈರಲ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget