ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಒಬ್ಬ ಕಳ್ಳತನ ಮಾಡಿ, ಜೈಲಿಗೆ ಹೋಗಿ ಬಂದರೂ, ಮತ್ತೆ ಕಳ್ಳತನ ಮಾಡುತ್ತಾನೆ ಇದ್ದ. ಪದೇ ಪದೇ ಕಳ್ಳತನ ಮಾಡುತ್ತಿದ್ದ ಆ ಕಳ್ಳನನ್ನ ಪೊಲೀಸರು ಪರ್ಸನಲ್ ಆಗಿ ವಿಚಾರಣೆ ಮಾಡಿದ್ದಾರೆ. ಬೆಂಗಳೂರು ಪೊಲೀಸರ ಕಾರ್ಯಾಚರಣೆಯಲ್ಲಿ ಖತರ್ನಾಕ್ ಮನೆಗಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಇದರ ಪೈಕಿ, ಓಬ್ಬ ಕಳ್ಳ, ತಾನು ಕದ್ದಿದ್ದ ಹಣದಲ್ಲಿ 20 ಮಕ್ಕಳ ಶಾಲಾ-ಕಾಲೇಜು ಫೀಸ್ ಕಟ್ಟಿರೋದಾಗಿ ಹೇಳಿದ್ದಾನೆ. ಈ ಅಚ್ಚರಿ ವಿಚಾರ ಕಳ್ಳನ ಮಾತಿನಿಂದಲೇ ಬೆಳಕಿಗೆ ಬಂದಿದೆ. ಕಳ್ಳತನ ಮಾಡಿದ್ದ ಹಣದಲ್ಲಿ 20 ಮಕ್ಕಳ ಶಾಲಾ, ಕಾಲೇಜು ಫೀಸ್ ಕಟ್ಟಿದ್ದ ಖತರ್ನಾಕ್ ಮನೆಗಳ್ಳರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅರೆಸ್ಟ್ ಆದವರನ್ನ ಬೇಗೂರುನಲ್ಲಿ ವಾಸ ಮಾಡೋ ಶಿವು ಅಲಿಯಾಸ್ ಶಿವರಪ್ಪನ್, ಅವನ ಗೆಳೆಯರಾದ ಅನಿಲ್ ಅಲಿಯಾಸ್ ಜಗ್ಗ ಹಾಗೂ ವಿವೇಕ್ ಎಂದು ಗುರುತಿಸಲಾಗಿದೆ. ಈ ಮೂವರ ಪೈಕಿ ಶಿವು ಅಲಿಯಾಸ್ ಶಿವರಪ್ಪನ್, ಈ ಗ್ಯಾಂಗ್ನ ಮಾಸ್ಟರ್ ಮೈಂಡ್. ಹೆಂಡತಿ, ಮಕ್ಕಳಿಲ್ಲದ ಶಿವು, ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಯೋಚನೆ ಮಾಡಿದ್ದ ಎನ್ನಲಾಗಿದೆ. ಇದರ ನಡುವೆ ಏರಿಯಾದಲ್ಲಿ ಮಕ್ಕಳ ಸ್ಕೂಲ್ ಫೀಸ್ ಕಟ್ಟೋದಕ್ಕೆ ತನ್ನ ಸ್ನೇಹಿತರು ಒದ್ದಾಡ್ತಿದ್ದನ್ನು ನೋಡಿದ್ದ. ಅದಾದ್ಮೇಲೆ ಶಿವು, ಬ್ಯಾಡರಹಳ್ಳಿ ಸೇರಿ ಸಾಕಷ್ಟೂ ಮನೆಗಳಲ್ಲಿ ಕಳ್ಳತನ ಮಾಡಿದ್ದ. ಕದ್ದ ಚಿನ್ನಾಭರಣವನ್ನು ತನ್ನ ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಹಾಗೂ ವಿವೇಕ್ ನ ಸಹಾಯದಿಂದ ಮಾರಾಟ ಮಾಡುತ್ತಿದ್ದ. ಹೀಗೆ ಮಾರಾಟ ಮಾಡಿದ ಹಣವನ್ನು, ಮಕ್ಕಳ ಶಾಲಾ-ಕಾಲೇಜು ಫೀಸ್ ಕಟ್ಟುತ್ತಿದ್ದ ಎನ್ನಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಶಿವು, ಚಿನ್ನ ಮಾರಾಟ ಮಾಡಿದ್ದ. ಆ ಹಣದಲ್ಲಿ ವಿವೇಕ್ ಗೆ 4 ಲಕ್ಷ, ಅನಿಲ್ ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 ಲಕ್ಷ ರೂ. ಹಣದಲ್ಲಿ ಏರಿಯಾದ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜು ಫೀಸ್ ಕಟ್ಟಿದ್ದಾನೆ. ಮನೆಗಳ್ಳರನ್ನ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಿವು, ಅನಿಲ್ ಹಾಗೂ ವಿವೇಕ್ ನನ್ನು ಬಂಧಿಸಿದ ಪೊಲೀಸರು 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ಟೈಂನಲ್ಲಿ ನನ್ನನ್ನ ಜೈಲಿಗೆ ಕಳುಹಿಸಿದ್ರು ಪರವಾಗಿಲ್ಲ. ನಾನು ಕಳ್ಳತನ ಮಾಡೋದು ಮಾತ್ರ ಬಿಡೋದಿಲ್ಲ ಅಂತ ಆರೋಪಿ ಶಿವು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಜೈಲಿಂದ ಹೊರ ಬಂದ್ಮೇಲೆ, ಮತ್ತೆ ಕಳ್ಳತನ ಮಾಡಿ 100ಕ್ಕೂ ಹೆಚ್ಚಿನ ಮಕ್ಕಳ ಸ್ಕೂಲ್ ಫೀಸ್ ಕಟ್ಟಿ ಸಾಯುತ್ತೇನೆ ಎಂದು ಆರೋಪಿ ನೇರವಾಗಿ ಪೊಲೀಸರ ಎದುರೇ ಹೇಳಿದ್ದಾನೆ.
ಸೂಟ್ ಕೇಸ್ ನಲ್ಲಿ 10 ವರ್ಷದ ಬಾಲಕಿಯ ಶವ ಪತ್ತೆ..! ರೈಲಿನಿಂದ ಸೂಟ್ ಕೇಸ್ ಎಸೆದಿರುವ ಶಂಕೆ..!