ಬೆಂಗಳೂರು

ಸಂತಾನಹರಣ ಆಪರೇಷನ್‌ಗೆಂದು ಬಂದ ವೈದ್ಯ ಫುಲ್ ಟೈಟು…! ಅನಸ್ತೇಶಿಯಾ ಪಡೆದ 9 ಮಹಿಳೆಯರೆದುರೇ ಗಡದ್‌ ನಿದ್ರೆ..!

192

ನ್ಯೂಸ್ ನಾಟೌಟ್: ವೈದ್ಯರು ದೇವರಿಗೆ ಸಮ ಅಂತೀವಿ. ಅಂಥಹ ವೈದ್ಯರೇ ಮಾಡಬಾರದ್ದನ್ನು ಮಾಡಿದ್ರೆ ಏನಾಗಬೇಡಿ ಹೇಳಿ. ಹೌದು. ಇಲ್ಲೊಬ್ಬ ವೈದ್ಯ ಅದನ್ನೇ ಮಾಡಿ ಇಡೀ ವೈದ್ಯ ಕುಲಕ್ಕೇ ಅಪಮಾನ ಎಸಗಿದ್ದಾನೆ.

ಹೌದು, ಆಪರೇಷನ್‌ಗೆಂದು ಬಂದ ವೈದ್ಯ ಕಂಠಪೂರ್ತಿ ಕುಡಿದಿದ್ದಾನೆ. ತೂರಾಡಿಕೊಂಡೇ ಆಸ್ಪತ್ರೆಗೆ ಬಂದಿದ್ದಾನೆ. ಸಾಲದು ಅನ್ನುವಂತೆ ಅಪರೇಷನ್‌ ಕೊಠಡಿಯಲ್ಲೇ ಗಡದ್ ನಿದ್ರೆಗೆ ಜಾರಿದ್ದಾನೆ. ಇತ್ತ ಅನಸ್ತೇಶಿಯಾ ಪಡೆದ 9 ಮಂದಿ ಮಹಿಳೆಯರ ಪರಿಸ್ಥಿತಿ ಚಿಂತಾಜನಕವಾಗಿದೆ.

ಚಿಕ್ಕಮಗಳೂರಿನ ಕಳಸ ತಾಲೂಕು ಆಸ್ಪತ್ರೆಯಲ್ಲಿ ಸಂತಾನ ಹರಣ ಕ್ಯಾಂಪ್ ಅನ್ನು ಆಯೋಜಿಸಲಾಗಿತ್ತು. ಈ ಕ್ಯಾಂಪ್‌ ನಲ್ಲಿ 9 ಮಂದಿ ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ನಡೆಸುವುದಕ್ಕಾಗಿ ಅನಸ್ತೇಶಿಯಾವನ್ನು ನೀಡಲಾಗಿತ್ತು. ಇನ್ನೇನು ವೈದ್ಯರು ಬರುತ್ತಾರೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು. ಈ ವೇಳೆ ಅಲ್ಲಿ ನಡೆದ ಸನ್ನಿವೇಶ ಒಂದು ಕ್ಷಣ ಎಲ್ಲರನ್ನೂ ಶಾಕ್ ಗೆ ಒಳಪಡಿಸಿತ್ತು. ಯಸ್‌…ಆಪರೇಷನ್‌ ಮಾಡಲು ಬಂದಿದ್ದ ವೈದ್ಯ ಕಂಠಪೂರ್ತಿ ಕುಡಿದು ತೂರಾಡಿಕೊಂಡು ಬಂದಿದ್ದ. ನೇರವಾಗಿ ಆಪರೇಷನ್ ಥಿಯೇಟರ್‌ಗೆ ಹೋಗಿ ಭರ್ಜರಿ ನಿದ್ರೆ ಮಾಡಿದ್ದಾನೆ. ಇದೀಗ ವೈದ್ಯ ಬಾಲಕೃಷ್ಣ ವಿರುದ್ಧ ಕ್ರಮಕ್ಕೆ ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ. ಸದ್ಯ ಆಪರೇಷನ್‌ ಅನ್ನು ರದ್ದು ಮಾಡಿ ಕ್ಯಾಂಪ್‌ಗೆ ಪೂರ್ಣ ವಿರಾಮ ಹಾಕಲಾಗಿದೆ.

See also  ಇಲ್ಲಿ ನೀವು ಬಾಡಿಗೆ ಮನೆ ಪಡೆಯಲು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು! ಏನಿದು ಅಂಕಪಟ್ಟಿಯ ಮಾನದಂಡ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget