Latestಕ್ರೀಡೆಕ್ರೀಡೆ/ಸಿನಿಮಾದೇಶ-ವಿದೇಶವೈರಲ್ ನ್ಯೂಸ್

ಟೆಸ್ಟ್‌ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಬಳಿಕ ವಿರಾಟ್ ಕೊಹ್ಲಿ ಟೆಂಪಲ್‌ ರನ್‌, ಅಯೋಧ್ಯೆಯಲ್ಲಿ ದಂಪತಿ

864

ನ್ಯೂಸ್ ನಾಟೌಟ್: ಟೆಸ್ಟ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಬಳಿಕ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಟೆಂಪಲ್‌ ರನ್‌ ಶುರು ಮಾಡಿದ್ದಾರೆ. ಇತ್ತೀಚೆಗೆ ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜ್ ರನ್ನು ಭೇಟಿಯಾಗಿದ್ದ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇಂದು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇಂದು(ಮೇ.25) ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಆಗಮಿಸಿ ವಿರಾಟ್‌ ಮತ್ತು ಅನುಷ್ಕಾ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅರ್ಚಕರು ಕೊಹ್ಲಿ ದಂಪತಿಗೆ ದೇವರ ಹಾರ ಹಾಕಿದರು. ಜೊತೆಗೆ ಅನುಷ್ಕಾ ಶರ್ಮಾ ಹಣೆಗೆ ತಿಲಕ ಇಟ್ಟರು. ಸ್ಟಾರ್‌ ಜೋಡಿ ದೇವಸ್ಥಾನಕ್ಕೆ ಆಗಮಿಸಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೇವಾಲಯ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ದಾಸ್ ಜಿ ಮಹಾರಾಜ್ ಮಹಂತ್, “ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಗೆ ಆಧ್ಯಾತ್ಮಿಕತೆ, ಸಂಸ್ಕೃತಿ, ದೇವರು ಮತ್ತು ಸನಾತನ ಧರ್ಮದ ಬಗ್ಗೆ ಆಳವಾದ ಪ್ರೀತಿ ಇದೆ. ಅವರು ಭಗವಾನ್ ರಾಮಲಲ್ಲಾ ದೇಗುಲಕ್ಕೆ ಭೇಟಿ ನೀಡಿ ನಂತರ ಭಗವಾನ್ ಹನುಮಂತನಿಂದ ಆಶೀರ್ವಾದ ಪಡೆದರು. ಅವರು ಇಲ್ಲಿ ಆಧ್ಯಾತ್ಮಿಕತೆ ಮತ್ತು ಪೌರಾಣಿಕ ವಿಷಯಗಳನ್ನು ಸಹ ಚರ್ಚಿಸಿದರು” ಎಂದು ತಿಳಿಸಿದ್ದಾರೆ.

2023ರ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೂ ಕೊಹ್ಲಿ ದಂಪತಿ ಆಗಮಿಸಿದ್ದರು.

ಮಂಟಪದಿಂದ ವರನನ್ನೇ ಅಪಹರಿಸಿದ ನೃತ್ಯಗಾರ್ತಿಯರ ಗ್ಯಾಂಗ್..! 7 ಗಂಟೆಗಳಲ್ಲಿ ವರನನ್ನು ಪತ್ತೆಹಚ್ಚಿದ ಪೊಲೀಸರು..!

ಬೀದಿ ನಾಯಿಗಳ ದಾಳಿಯಿಂದ ರಕ್ಷಿಸುವಂತೆ ಕಿರುಚಿದರೂ ಜೊತೆಗಿದ್ದ ಅಪ್ಪನಿಗೆ ಕೇಳಲೇ ಇಲ್ಲ..! ಮಗಳನ್ನು ಕಳೆದುಕೊಂಡ ಕಿವುಡ ಅಪ್ಪ-ಅಮ್ಮನ ಮನಕಲಕೋ ಕಥೆ..!

9 ಇಂದಿರಾ ಕ್ಯಾಂಟೀನ್‌ ಗಳನ್ನು ಲೋಕಾರ್ಪಣೆಗೊಳಿಸಿದ ಸಿಎಂ, ಶೀಘ್ರದಲ್ಲೇ ರಾಜ್ಯಾದ್ಯಂತ ಹೊಸದಾಗಿ ಇನ್ನೂ 184 ಕ್ಯಾಂಟೀನ್ ಗಳನ್ನು ಆರಂಭಿಸುತ್ತೇವೆ ಎಂದ ಸಿದ್ದರಾಮಯ್ಯ

See also  ಯುವಕನೊಂದಿಗೆ 32ರ ಆಂಟಿಯ ಲವ್ವಿ ಡವ್ವಿ!!ರೀಲ್ಸ್ ಪ್ರಿಯಕರನಿಗಾಗಿ ಗಂಡನನ್ನೇ ಕೊಂದ ಪಾಪಿ ಪತ್ನಿ!ದುಪ್ಪಟಾದಿಂದಲೇ ಕತ್ತು ಹಿಸುಕಿ ಮರ್ಡರ್ !
  Ad Widget   Ad Widget   Ad Widget   Ad Widget   Ad Widget   Ad Widget   Ad Widget