ಕ್ರೈಂ

ಸುಳ್ಯ: ಶಂಕಿತ ಡೆಂಗ್ಯೂಗೆ ಅತಿಥಿ ಶಿಕ್ಷಕಿ ಬಲಿ, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಬದುಕಲಿಲ್ಲ ಜೀವ..!

162

ನ್ಯೂಸ್ ನಾಟೌಟ್: ಶಂಕಿತ ಡೆಂಗ್ಯೂ ಜ್ವರಕ್ಕೆ ಸುಳ್ಯ ತಾಲೂಕಿನ ಮುರುಳ್ಯದ ಅತಿಥಿ ಶಿಕ್ಷಕಿಯೊಬ್ಬರು ಬಲಿಯಾಗಿದ್ದಾರೆ. ಮೃತರನ್ನು ಮುರುಳ್ಯದ ದಿ. ತಿಮ್ಮಪ್ಪರವರ ಪುತ್ರಿ ಕು. ಜಯಾ ಕೆ (೨೮ ವ‍ರ್ಷ) ಎಂದು ಗುರುತಿಸಲಾಗಿದೆ.

ಜಯಾ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಇವರಿಗೆ ತೀವ್ರವಾಗಿ ಜ್ವರ ಕಂಡು ಬಂದಿದ್ದುದರಿಂದ ಇವರನ್ನು ಕಾಣಿಯೂರಿನ ಆಸ್ಪತ್ರೆ, ಪುತ್ತೂರಿನ ಧನ್ವಂತರಿ ಆಸ್ಪತ್ರೆ, ಪಂಜಿಗಾರಿನ ಆಸ್ಪತ್ರೆ ಸೇರಿದಂತೆ ಸುಳ್ಯ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದರೆ ಎಲ್ಲಿಯೂ ಏನೀ ಪ್ರಯೋಜನ ಆಗದಿದ್ದುದರಿಂದ ಆಕೆಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.

ಮೃತರು ಮುರುಳ್ಯದ ಸರ್ಕಾರಿ ಶಾಲೆ, ಕರಂಬಿಲ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರು ತಾಯಿ, ಸಹೋದರಿಯರು, ಕುಟುಂಬಸ್ಥರನ್ನು ಅಗಲಿದ್ದಾರೆ.

See also  HDK: ನನ್ನ ಸುತ್ತ ಇರುವ 45 ಜನರ ಮೊಬೈಲ್‌ ಫೋನ್‌ಗಳನ್ನೂ ಕದ್ದಾಲಿಸಲಾಗುತ್ತಿದೆ ಎಂದ ಹೆಚ್.ಡಿ.ಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget