ಕರಾವಳಿಕೊಡಗುರಾಜಕೀಯಸುಳ್ಯ

ದೆಹಲಿ:ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಟಿ.ಎಂ. ಶಹೀದ್ ತೆಕ್ಕಿಲ್

211

ನ್ಯೂಸ್ ನಾಟೌಟ್ : ಕಳೆದ ಬಾರಿ ಭಾರೀ ಮಳೆಯಿಂದ ಸಂಪಾಜೆ ಗ್ರಾಮದ ವ್ಯಾಪ್ತಿಯಲ್ಲಿ ಆದ ನೆರೆ ಪ್ರವಾಹ ಪೀಡಿತ ಪ್ರದೇಶಕ್ಕೆ ವಿ‍ಶೇಷ ಅನುದಾನ ನೀಡಬೇಕಾಗಿ ಕಾಂಗ್ರೆಸ್ ವಕ್ತಾರ ಟಿ . ಎಂ.ಶಹೀದ್ ಮುಖ್ಯಮಂತ್ರಿ ಸಿದ್ದರಾಮಯ್ಯರವರ ದೆಹಲಿಯ ರಾಜಭವನಕ್ಕೆ ಭೇಟಿಯಾಗಿ ಮನವಿ ಮಾಡಿದ್ದಾರೆ.

ಕಳೆದ ವರ್ಷ ಸಂಪಾಜೆ ,ಕಲ್ಲುಗುಂಡಿಯ ಪ್ರದೇಶದಲ್ಲಿ ನೆರೆ, ಮಳೆ, ಜಲ ಪ್ರಳಯ,ಭೂಕಂಪದಿಂದಾಗಿ ಅತೀ ಹೆಚ್ಚು ಹಾನಿಗೊಳಗಾಗಿದೆ.ಜನರು ತಮ್ಮ ಜೀವನೋಪಾಯಕ್ಕಾಗಿ ಮಾಡಿದ ಕೃಷಿ ನೀರಲ್ಲಿ ಕೊಚ್ಚಿ ಹೋಗಿ ಸಂಪೂರ್ಣವಾಗಿ ನಾಶವಾಯಿತು. ಜನರು ತಮ್ಮ ಮನೆಗಳನ್ನು ಕಳೆದುಕೊಂಡು, ಗಂಜಿ ಕೇಂದ್ರದಲ್ಲಿ ಇರಬೇಕಾಯಿತು . ಹೀಗಾಗಿ ಟಿ.ಎಂ.ಶಹೀದ್ ಅವರು ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನಕ್ಕೆ ಮನವಿ ಮಾಡಿದರು. 2013 ರಲ್ಲಿ ನೀಡಿದ ಅನುದಾನದ ಬಗ್ಗೆ ಪರಿಶೀಲಿಸಿ ತಕ್ಷಣ ವಿಶೇಷ ಅನುದಾನ ನೀಡಲು ಸಂಬಂಧ ಪಟ್ಟವರಿಗೆ ಆದೇಶಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಭರವಸೆ ನೀಡಿದ್ದಾರೆ.

See also  ಫುಟ್ಬಾಲ್ ನಲ್ಲಿ ಗಿನ್ನಿಸ್ ದಾಖಲೆ ಸಾಧಿಸಿದ ಮಂಗಳೂರು ಹುಡುಗ,ವಿಶ್ವದ ಇಬ್ಬರ ದಾಖಲೆ ಮುರಿದು ಸಾಧನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget