ನ್ಯೂಸ್ ನಾಟೌಟ್: ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಸಿರಿಯಾದಲ್ಲಿ ಇತ್ತೀಚಿಗೆ ಇಸ್ಲಾಮಿಸ್ಟ್ ಬಂಡುಕೋರರು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಲ್ಲಿನ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರದ ಮಹತ್ವವನ್ನು ಭಾರತ ಒತ್ತಿ ಹೇಳಿದೆ.
“ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಈ ಪ್ರದೇಶದಲ್ಲಿನ ತ್ವರಿತಗತಿಯ ಸನ್ನಿವೇಶದ ಬಗ್ಗೆ ಭಾರತ ಕಳವಳ ಹೊಂದಿದೆ. ಸಿರಿಯಾದ ರಾಜಕೀಯ ಶಾಂತಿಯುತ ಮತ್ತು ಅಂತರ್ಗತ ಹಾಗೂ ಸಿರಿಯನ್ ಸಮಾಜದ ಎಲ್ಲಾ ವರ್ಗಗಳ ಆಕಾಂಕ್ಷೆಗಳು ಮತ್ತು ಹಿತಾಸಕ್ತಿಗಳನ್ನು ಗೌರವಿಸಬೇಕು ಎಂದು ಭಾರತ ಹೇಳಿಕೆಯಲ್ಲಿ ಸಲಹೆ ನೀಡಿದೆ”.
ಡಮಾಸ್ಕಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಜಾಗರೂಕವಾಗಿದೆ ಸಿರಿಯಾದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಗಾಗಿ ಅಲ್ಲಿನ ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭರವಸೆ ನೀಡಿದೆ.
ಸಿರಿಯನ್ ಬಂಡುಕೋರರು ಭಾನುವಾರ ಡಮಾಸ್ಕಸ್ಗೆ ಲಗ್ಗೆ ಹಾಕುವುದರೊಂದಿಗೆ ಅಲ್ಲಿನ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಎರಡು ದಶಕಗಳ ಆಡಳಿತವನ್ನು ಕೊನೆಗೊಳಿಸಿ ಪಲಾಯನವಾಗಿದ್ದಾರೆ. ಅಸ್ಸಾದ್ ಮತ್ತು ಅವರ ಕುಟುಂಬಕ್ಕೆ ರಷ್ಯಾ ಆಶ್ರಯ ನೀಡಿದೆ ಎಂದು ಕ್ರೆಮ್ಲಿನ್ ಮೂಲಗಳು ಖಚಿತಪಡಿಸಿವೆ.
ಡಿಸೆಂಬರ್ 6 ರಂದು ಭಾರತ ಸರ್ಕಾರವು ಭದ್ರತಾ ಪರಿಸ್ಥಿತಿಯಿಂದಾಗಿ ಸಿರಿಯಾದಲ್ಲಿರುವ ಭಾರತೀಯರು ಸ್ವದೇಶಕ್ಕೆ ವಾಪಾಸ್ಸಾಗುವಂತೆ ಕರೆ ನೀಡಿತ್ತು. ತುರ್ತು ಸಹಾಯವಾಣಿ ಮತ್ತು ಇಮೇಲ್ ID hoc.damascus@mea.gov.in) ಬಳಸಿಕೊಂಡು ಡಮಾಸ್ಕಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಿರಿಯಾದಲ್ಲಿರುವ ಭಾರತೀಯ ನಾಗರಿಕರಿಗೆ ಶಿಫಾರಸು ಮಾಡಿದೆ.
ಸಿರಿಯಾದಿಂದ ಬೇಗನೆ ಹೊರಡುವವರಿಗೆ ವಿಮಾನ ಲಭ್ಯವಿದ್ದು, ಇತರರು ತೀವ್ರ ಜಾಗ್ರತೆ ವಹಿಸುವಂತೆ, ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದೆ.
Click