ಕರಾವಳಿರಾಜಕೀಯ

30 ವರ್ಷ ಆಗದ ಕಾರ್ಕಳದ ಅಭಿವೃದ್ದಿ ಈಗ ಆಗಿದೆ, ಈ ಬಾರಿ ಸುನೀಲ್ ಕುಮಾರ್ ಬಂದರೆ ಸ್ವರ್ಣ ಕಾರ್ಕಳದ ಕನಸು ನನಸಾಗಲಿದೆ ಎಂದ ಬಿಜೆಪಿ ಮೋರ್ಚಾ ಉಪಾಧ್ಯಕ್ಷ ಸರ್ವಜ್ಞ ತಂತ್ರಿ

238

ನ್ಯೂಸ್ ನಾಟೌಟ್ : ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಕಾರ್ಕಳ ವಿಧಾನ ಸಭಾ ಕ್ಷೇತ್ರ ಮತ್ತಷ್ಟು ರಂಗೇರಿದೆ. “ಈ ಸಲ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಗೆಲ್ಲುತ್ತಾರೆ. ಅವರು ಗೆದ್ದರೆ ಮಾತ್ರ ಸ್ವರ್ಣ ಕಾರ್ಕಳದ ಅಭಿವೃದ್ಧಿ ಸಾಧ್ಯ” ಎಂದು ಬಿಜೆಪಿ ಮೋರ್ಚಾ ಉಪಾಧ್ಯಕ್ಷರು ಸರ್ವಜ್ಞ ತಂತ್ರಿ ನ್ಯೂಸ್ ನಾಟೌಟ್‌ಗೆ ಪ್ರತಿಕ್ರಿಯಿಸಿದರು.

ಕಳೆದ 30 ವರ್ಷಗಳಿಂದ ಕಾರ್ಕಳ ಅಭಿವೃದ್ಧಿ ಕಂಡಿರಲಿಲ್ಲ. ಈ ಹಿಂದೆ ಆಡಳಿಕ್ಕೆ ಬಂದಿದ್ದ ಕಾಂಗ್ರೆಸ್ ಆಗಲಿ ಜೆಡಿಎಸ್ ಆಗಲಿ ಯಾರೂ ಕೂಡಾ ಏನು ಮಾಡಲಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ .ವಿ ಸುನೀಲ್ ಕುಮಾರ್ ಆಡಳಿತದಲ್ಲಿ ಅಭಿವೃದ್ಧಿಯಾಗದ ಕಾರ್ಕಳವನ್ನು ಮೇಲೆತ್ತಿದ್ದಾರೆ. ಅಲ್ಲದೆ ಕಾರ್ಕಳದ ಜನತೆಗೆ ನಾಡು ನುಡಿ , ಭಾಷೆ ಸಂಸ್ಕ್ರತಿಯ ಅರಿವಿಗೆ ಮತ್ತು ಅವುಗಳ ಉಳಿವಿಗೆ ಕಾರ್ಕಳೋತ್ಸವದಂತಹ ಕಾರ್ಯಕ್ರಮಗಳನ್ನು ಮಾಡಿ ರಾಷ್ಟ್ರಮಟ್ಟದಲ್ಲಿ ಕಾರ್ಕಳವನ್ನು ಗುರುತಿಸುವಂತೆ ವಿ.ಸುನೀಲ್ ಕುಮಾರ್ ಮಾಡಿದ್ದಾರೆ ಎಂದರು.

ಸರಕಾರಿ ಶಾಲೆಗಳ ಅಭಿವೃದ್ದಿ, ಪ್ರವಾಸಿಗರಿಗೆ ತುಳುನಾಡ ಸಂಸ್ಕೃತಿ – ಇತಿಹಾಸ ಸಾರುವ ಪರಶುರಾಮ್ ಥೀಮ್ ಪಾರ್ಕ್ ರಚನೆ, ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ, ರೈತರಿಗೆ ಕೃಷಿಮೇಳ ಹಾಗೂ ಪ್ರತೀ ಮನೆಗೂ ವಿದ್ಯುತ್ ಸೌಲಭ್ಯ, ಮನೆಮನೆಗೂ ರಸ್ತೆ ನಿರ್ಮಾಣ ಜೊತೆಗೆ ಮೂಲಸೌಕರ್ಯಗಳಾದ ನೀರಿನ ಟ್ಯಾಂಕ್ ಮತ್ತು ಕೃಷಿಕರಿಗೆ ಸಹಾಯವಾಗುವಂತೆ ಅಣೆಕಟ್ಟಿನ ನಿರ್ಮಾಣ , ಬಡ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನ , ತುಳುನಾಡಿನ ವೀರ ಪುರುಷರಿಗೆ ವಿಶೇಷ ಸ್ಥಾನಮಾನ , ಕಾರ್ಖಾನೆ ನಿರ್ಮಾಣ , ಘನತಾಜ್ಯಗಳ ಘಟಕಗಳ ನಿರ್ಮಾಣ , ಹಾಗೂ ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ ಅಲ್ಲದೆ ಐಸಿಯು ವಾರ್ಡಗೆ ಬೆಡ್‌ಗಳ ವ್ಯವಸ್ಥೆ ಮಾಡಿದ ಅಭಿವೃದ್ಧಿಯ ಹರಿಕಾರ ಬಿಜೆಪಿ ಅಭ್ಯರ್ಥಿ ವಿ ಸುನೀಲ್ ಎಂದು ಅವರು ತಿಳಿಸಿದರು.

ಕೊರೊನಾ ಸಮಯದಲ್ಲಿ ಮನೆಯನ್ನು ಬಿಟ್ಟು ಜನರಿಗೋಸ್ಕರ ಹೋರಾಡಿದ ಜನ-ನಾಯಕ . ಈ ಸಲ ಕೂಡಾ ಸುನೀಲ್ ಕುಮಾರ್ ಬಂದರೆ ಅವರ ಕನಸಿನ ಸ್ವರ್ಣ ಕಾರ್ಕಳದ ಅಭಿವೃದ್ಧಿಗಳ ಕನಸನ್ನು ನನಸು ಮಾಡುವ ಮೂಲಕ ಕಾರ್ಕಳವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಬಿಜೆಪಿ ಮೋರ್ಚಾ ಉಪಾಧ್ಯಕ್ಷರಾದ ಸರ್ವಜ್ಞ ತಂತ್ರಿ ಹೇಳಿದರು.

See also  ವಿವಾಹಿತೆಯನ್ನು ವರಿಸುವುದಾಗಿ ದೈವನರ್ತಕ ವಾಗ್ದಾನ, ಕಾರವಾರದ ದೈವಸ್ಥಾನದಲ್ಲಿ ನಡೀತು ಅಚ್ಚರಿ,ನೆಟ್ಟಿಗರಿಂದ ಟೀಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget