ನ್ಯೂಸ್ ನಾಟೌಟ್: ಕನ್ನಡ ಸರಿಗಮಪ ಖ್ಯಾತಿಯ ಹೆಡ್ ಕಾನ್ ಸ್ಟೇಬಲ್ ಸುಬ್ರಹ್ಮಣ್ಯ ಶನಿವಾರ(ಜ.13)ರಂದು ದೊಡ್ಡಡ್ಕ ಸ್ಚಾಮಿ ಕೊರಗಜ್ಜ ದೈವದ ಸಾನಿಧ್ಯಕ್ಕೆ ಭೇಟಿ ನೀಡಿದ್ದಾರೆ.
ಮಕರ ಸಂಕ್ರಾಂತಿಯ ವಿಶೇಷ ದಿನದಂದು ಕಾರ್ಣಿಕ ಕ್ಷೇತ್ರ ದೊಡ್ಡಡ್ಕದ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಭಕ್ತಿ ಗೀತೆಯನ್ನು ಹಾಡಿದ್ದಾರೆ ಎಂದು ದೈವಸ್ಥಾನ ಮೂಲಗಳು ತಿಳಿಸಿದೆ.
ಸರಿಗಮಪ ಶೋನಿಂದ ಸುಬ್ರಹ್ಮಣ್ಯ ಹೆಸರು ಮಾಡಿದ್ದರು. ಸುಬ್ರಹ್ಮಣ್ಯ ಅವರು ಕೋಲಾರ ಮೂಲದವರಾಗಿದ್ದು, ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.