ಕರಾವಳಿಸುಳ್ಯ

ಸುಳ್ಯ: ಎಲೆಯಲ್ಲಿ ಮೂಡಿ ಬಂದ ಅಯೋಧ್ಯೆಯ ರಾಮಮಂದಿರದ ಚಿತ್ರ..!ಈ ಅದ್ಭುತ ಚಿತ್ರವನ್ನು ರಚಿಸಿದ ಕಲಾವಿದ ಯಾರು ಗೊತ್ತೆ?

154

ನ್ಯೂಸ್ ನಾಟೌಟ್‌: ಇಡೀ ದೇಶವೇ ಜನವರಿ 22ರ ಸಂಭ್ರಮದ ಕ್ಷಣಕ್ಕಾಗಿ ಕಾಯುತ್ತಿದೆ.ಹೌದು,ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿದೆ.ಇನ್ನು 9 ದಿನಗಳು ಕಳೆದರೆ ಆ ದಿನ ಬಂದೇ ಬಿಡುತ್ತದೆ.ಇದೀಗ ಸಕಲ ತಯಾರಿಗಳು ಭರದಿಂದ ಸಾಗುತ್ತಿದೆ. ರಾಮನ ಭಕ್ತರಂತು ವಿಶೇಷ ರೀತಿಯಲ್ಲಿ ಲೋಕಾರ್ಪಣೆಗಾಗಿ ಶುಭಾಶಯಗಳನ್ನು ಕೋರುತ್ತಿದ್ದಾರೆ.ಇದೀಗ ಇಲ್ಲೊಬ್ಬ ಯುವಕ ರಾಮಮಂದಿರದ ಚಿತ್ರವನ್ನು ಎಲೆಯಲ್ಲಿ ಬಿಡಿಸುವುದರ ಮೂಲಕ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿತ್ರಕಲೆ ಅನ್ನೋದು ಅದ್ಭುತ ಕಲೆ. ಆದರೆ ಇದು ಎಲ್ಲರಿಗೂ ಒಲಿದು ಬರುವುದಿಲ್ಲ. ಕೆಲವರಿಗೆ ಇದು ರಕ್ತದಲ್ಲಿಯೇ ಕರಗತವಾಗಿರುತ್ತದೆ. ಒಂದು ಸಲ ಅದು ನಮ್ಮ ಕೈ ಹಿಡಿದ್ರೆ ನಂತರ ನಮ್ಮ ನೆರಳಲ್ಲೇ ಇರುತ್ತೆ. ಅದೊಂದು ತಪಸ್ಸು ಇದ್ದ ಹಾಗೆ. ಕರಗತ ಮಾಡಿಕೊಂಡರೆ ಚಿತ್ರಕಲೆ ಇನ್ನೂ ಸುಲಭ.ಇದೀಗ ಸುಳ್ಯದ ಶಶಿ ಅಡ್ಕಾರ್‌ ಎನ್ನುವ ಯುವಕರೊಬ್ಬರು ಎಲೆಯಲ್ಲಿ ರಚಿಸಿದ ಕಲಾಕೃತಿಗಳು ಈ ಹಿಂದೆಯೂ ಎಲ್ಲೆಡೆ ವೈರಲ್ ಆಗುತ್ತಿತ್ತು.ಆದರೆ ಈ ಬಾರಿ ಅಯೋಧ್ಯೆಯ ರಾಮಮಂದಿರದ ಅದ್ಭುತ ಚಿತ್ರವನ್ನು ಎಲೆಯಲ್ಲಿ ಬಿಡಿಸಿದ್ದು, ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

See also  ಅರಂಬೂರು: ನಿಯಂತ್ರಣ ತಪ್ಪಿ ಎರಡು ಪಲ್ಟಿಯಾದ ವ್ಯಾಗನರ್..! ಮಹಿಳೆ ಸೇರಿದಂತೆ ಹಲವರಿಗೆ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget