ಕರಾವಳಿಸುಳ್ಯ

ಸುಳ್ಯ:ಗಂಭೀರ ಗಾಯಗೊಂಡಿದ್ದ ಅಟೋ ಚಾಲಕ ನಿಧನ, 6 ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿ

309

ನ್ಯೂಸ್ ನಾಟೌಟ್ : ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಜ.21ರಂದು ಸಂಜೆ ವೇಳೆ ಮನೆ ಸಮೀಪ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿದ್ದು,ರಾಜೇಶ್ ಎಂಬವರು ಗಂಭೀರ ಗಾಯಗೊಂಡಿದ್ದರು.

ಫಲಿಸಲಿಲ್ಲ ಚಿಕಿತ್ಸೆ:

ವೃತ್ತಿಯಲ್ಲಿ ಆಟೋ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಡೆಕೋಲಿನ ಕನ್ಯಾನದವರಾದ ರಾಜೇಶ್ ಅಂದು(ಜ.21) ಕೆಲಸದ ನಿಮಿತ್ತ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದರು. ಇಳಿಜಾರು ಪ್ರದೇಶದಲ್ಲಿ ನಿಯಂತ್ರಣ ಕಳೆದುಕೊಂಡ ರಿಕ್ಷಾ ಮಗುಚಿ ಬಿದ್ದಿತ್ತು. ಅಪಘಾತದಲ್ಲಿ ರಾಜೇಶ್ ರಿಗೆ ತಲೆ ಭಾಗಕ್ಕೆ ಗಂಭಿರ ಗಾಯಗಳಾಗಿತ್ತು.ತಕ್ಷಣವೇ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದು ಹೋಗಿದ್ದು, ವೈದ್ಯರ ಸಲಹೆ ಮೇರೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದರು. ಆದರೆ 6 ದಿನಗಳ ಬಳಿಕ ರಾಜೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ( ಜ.26ರ ತಡರಾತ್ರಿ) ನಿಧನರಾಗಿದ್ದಾರೆಂದು ತಿಳಿದುಬಂದಿದೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. 

See also  ಬೆಂಗಳೂರು: ಕಾರು- ಬೈಕ್‌ ಅಪಘಾತದಲ್ಲಿ ಕೊಲ್ಲಮೊಗ್ರದ ಯುವಕ ಮೃತ್ಯು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget