ನ್ಯೂಸ್ ನಾಟೌಟ್ :ಯುವಕನೋರ್ವ ಗಾಂಜಾ ಸೇವಿಸಿರುವ ಶಂಕೆ ಮೇರೆಗೆ ಆತನನ್ನು ಬಂಧಿಸಿರುವ ಘಟನೆ ಬಗ್ಗೆ ಸುಳ್ಯದಿಂದ ವರದಿಯಾಗಿದೆ.
ಅರಂತೋಡು ಗ್ರಾಮದ ತುಷಾರ್ ಬಿ ಕೆ (22ವ ) ಎಂಬಾತನನ್ನು ಅಂದಾಜು 510ಗ್ರಾಂ ತೂಕದ ಗಾಂಜಾದೊಂದಿಗೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ ರವರು ಸಂಶಯಾಸ್ಪದ ವ್ಯಕ್ತಿಯನ್ನು ತಡೆದು ವಿಚಾರಿಸಿರುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.