ಕರಾವಳಿಸುಳ್ಯ

ಸುಳ್ಯ: ಮೇಯಲು ಬಂದ ಆಡುಗಳನ್ನು ಕಟ್ಟಿ ಹಾಕಿದ ನಗರ ಪಂಚಾಯತ್..! ದಂಡ ಕಟ್ಟಿ ಬಿಡಿಸಿಕೊಂಡು ಹೋಗುವಂತೆ ಮಾಲೀಕರಿಗೆ ಖಡಕ್ ಸೂಚನೆ

198

ನ್ಯೂಸ್ ನಾಟೌಟ್: ಸಾರ್ವಜನಿಕ ಸ್ಥಳದಲ್ಲಿ ಮೇಯಲು ಬಂದ ಆಡುಗಳನ್ನು ಸುಳ್ಯ ನಗರ ಪಂಚಾಯತ್‌ ಹಿಡಿದು ಕಟ್ಟಿ ಹಾಕಿದೆ.

ಶುಕ್ರವಾರ ಮೂರು ಆಡುಗಳು ಮೇಯಲು ಬಂದಿದ್ದವು. ನಗರ ಪಂಚಾಯತ್ ನಲ್ಲಿದ್ದ ಗಿಡಗಳನ್ನು ಚೆನ್ನಾಗಿ ಮೇದಿದ್ದವು. ಇದರಿಂದ ರೊಚ್ಚಿಗೆದ್ದ ಸಿಬ್ಬಂದಿ ಆಡುಗಳನ್ನು ಹಿಡಿದು ಕಟ್ಟಿ ಹಾಕಿದ್ದಾರೆ. ನಗರ ಪಂಚಾಯತ್ ಗೆ ಸೂಕ್ತ ದಂಡ ಕಟ್ಟಿ ಬಿಡಿಸಿಕೊಂಡು ಹೋಗುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಸಾಕುಪ್ರಾಣಿಗಳನ್ನು ಬಿಡಬಾರದು ಎಂದು ಅನೇಕ ಬಾರಿ ಸೂಚಿಸಲಾಗಿದೆ. ಹೀಗಿದ್ದರೂ ಜನರು ರಸ್ತೆಗೆ ಸಾಕು ಪ್ರಾಣಿಗಳನ್ನು ಬಿಡುತ್ತಿರುವುದಕ್ಕೆ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

See also  ಶ್ವಾನಕ್ಕಂತ ಇರಿಸಿದ ಚಿಕನ್‌ನನ್ನು ತಿಂದ ಆ್ಯಂಕರ್ ಅನುಶ್ರೀ..! ಬಳಿಕ ಗೊತ್ತಾಗಿದ್ದು ಹೇಗೆ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget