ನ್ಯೂಸ್ ನಾಟೌಟ್ : ಸರಕಾರಿ ಪ್ರೌಢ ಶಾಲೆ ಅಜ್ಜಾವರ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಸ. ಪ್ರೌ.ಶಾಲೆ ಅಜ್ಜಾವರ, ಪ್ರತಾಪ ಯುವಕ ಮಂಡಲ( ರಿ ) ಅಜ್ಜಾವರ , ಚೈತ್ರ ಯುವತಿ ಮಂಡಲ (ರಿ ) ಅಜ್ಜಾವರ ಇವರ ಸಹಯೋಗದೊಂದಿಗೆ ಸಾಹಿತ್ಯ ಸಂಭ್ರಮ 2023 ಉದ್ಘಾಟನೆ ಮತ್ತು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ನೆನಪು ಹಾಗೂ ಗಾಯನ ಕಾರ್ಯಕ್ರಮ ನಡೆಯಿತು.

ಈ ವೇಳೆ ಅಜ್ಜಾವರ ಗ್ರಾಮ ಪಂಚಾಯತ್ ಬಳಿಯಿಂದ ಕನ್ನಡ ಭುವನೇಶ್ವರಿ ಮೆರವಣಿಗೆ ಅಜ್ಜಾವರ ಸರಕಾರಿ ಪ್ರೌಢ ಶಾಲೆ ವರೆಗೆ ನಡೆಯಿತು.ಮೆರವಣಿಗೆಯ ಉದ್ಘಾಟನೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಕಲ್ತಡ್ಕ ಅಜ್ಜಾವರ ನೆರವೇರಿಸಿದರು.
ಧ್ವಜಾರೋಹಣವನ್ನು ಅಜ್ಜಾವರ ಗ್ರಾ.ಪಂ. ಸದಸ್ಯರಾದ ಲೀಲಾ ಮನಮೋಹನ ನಡೆಸಿಕೊಟ್ಟರು.ಸ್ಪರ್ಧಾ ಕಾರ್ಯಕ್ರಮವನ್ನು ರಾಹುಲ್ ಅಡ್ಪಂಗಾಯ ನಡೆಸಿ ಕೊಟ್ಟರು. ಚಂದ್ರಶೇಖರ್ ಪೇರಾಲ್ ಸಭಾಧ್ಯಕ್ಷತೆ ವಹಿಸಿ ಕನ್ನಡ ನಾಡು ನುಡಿ ಸಂಸ್ಕೃತಿ ಹಾಗೂ ಕನ್ನಡಾಭಿಮಾನದ ಬಗ್ಗೆ ಮಾತನಾಡಿದರು.

ಭಾಸ್ಕರ್ ರಾವ್ ಬಯಂಬು ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಿದರು.ಶ್ರೀ ಮಹಿಷ ಮರ್ದಿನೀ ದೇವಸ್ಥಾನ ಅಜ್ಜಾವರ ಇಲ್ಲಿನ ಧರ್ಮದರ್ಶಿಗಳು ಮಾತನಾಡಿ ಕನ್ನಡ ನಾಡು ನುಡಿ ಬಗ್ಗೆ ವಿವರಿಸಿ ಕನ್ನಡ ಕವಿತೆ ಹಾಡಿದರು.ಭಾವನ ಸುಗಮ ಸಂಗೀತ ಬಳಗ ಸುಳ್ಯ ಇದರ ಅಧ್ಯಕ್ಷ ಕೆ.ಆರ್ .ಗೋಪಾಲ್ ಕೃಷ್ಣ ಇವರು ದ. ರಾ ಬೇಂದ್ರೆ ಯವರ ನೆನಪಿಸುವ ಗಾಯನವನ್ನು ಹಾಡಿದರು.
ಕಾರ್ಯಕ್ರಮ ದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.ಸ.ಪ್ರೌ. ಶಾಲೆ ಅಜ್ಜಾವರ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯರಾಮ್ ಬಿ.ಎಸ್ ಬಹುಮಾನ ವಿತರಿಸಿದರು.ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಗೋಪಿನಾಥ್ ಮೇತಡ್ಕ, ಚನಿಯ ಕಲ್ತಡ್ಕ, ಗುರುರಾಜ್ ಅಜ್ಜಾವರ , ತೇಜಸ್ವಿ ಕಡಪಾಲದಯಾನಂದ ಆಳ್ವ ,ರಾಮಚಂದ್ರ ಪಲ್ಲತಡ್ಕ, ಶಶ್ಮಿ ಭಟ್ , ಕಾರ್ಯಕ್ರಮ ನಿರ್ದೇಶಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಗೋಪಿನಾಥ್ ಮೇತಡ್ಕ ಸ್ವಾಗತಿಸಿದರು. ಸಾವಿತ್ರಿ ಕಣೆಮರಡ್ಕ ಧನ್ಯವಾದವಿತ್ತರು. ಕಾರ್ಯಕ್ರಮ ನಿರೂಪಣೆ ವಿದ್ಯಾ ಕುಮಾರಿ ನೆರವೇರಿಸಿದರು.