ಕರಾವಳಿಸುಳ್ಯ

ಸುಳ್ಯ:ಕೋಳಿ ಸಾರಿಗಾಗಿ ಅಪ್ಪ-ಮಗನ ಕಿತ್ತಾಟ,ಮಗನ ದುರಂತ ಅಂತ್ಯ

242

ನ್ಯೂಸ್ ನಾಟೌಟ್: ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ರಾತ್ರಿ ವೇಳೆ ನಡೆದಿದೆ.ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಎಂಬಲ್ಲಿಂದ ವರದಿಯಾಗಿದ್ದು, ಶಿವರಾಮ(32) ಕೊಲೆಗೀಡಾದ ವ್ಯಕ್ತಿ.

ನಿನ್ನೆ ರಾತ್ರಿ ಮನೆಯಲ್ಲಿ ಕೋಳಿ ಸಾರು ಮಾಡಲಾಗಿತ್ತು.ಮಗ ಶಿವರಾಮ ರಾತ್ರಿ ಮನೆಗೆ ಬರುವಾಗ ಕೋಳಿ ಸಾರು ಖಾಲಿ ಆಗಿತ್ತೆನ್ನಲಾಗಿದೆ.ಈ ವೇಳೆ ಕೋಳಿ ಸಾರು ಖಾಲಿಯಾಯಿತು ಎಂಬ ಕಾರಣದಿಂದ ನಡೆದ ಜಗಳ ಮಾತಿಗೆ ಮಾತು ಬೆಳೆದು ತಾರಕಕ್ಕೇರಿತು.ಬಳಿಕ ಕೋಪಗೊಂಡ ತಂದೆ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದರೆನ್ನಲಾಗಿದೆ. ಬಲವಾದ ಏಟು ಬಿದ್ದು ಶಿವರಾಮ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.ಏಟು ಬಲವಾಗಿ ಬಿದ್ದ ಪರಿಣಾಮ ತಲೆಯ ಬುರುಡೆ ಒಡೆದಿದ್ದು,ಪರಿಣಾಮವಾಗಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನಪ್ಪಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮರ ಮೃತ ದೇಹವನ್ನು ಕಡಬ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಶಿವರಾಮ (32ವರ್ಷ) ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

See also  ಸುಳ್ಯ :'ಶ್ರೀ ಕೃಷ್ಣ ಜನ್ಮಾಷ್ಟಮಿ' ಸಂಭ್ರಮಕ್ಕೆ ದಿನಗಣನೆ,"ಸುಳ್ಯ ಮೊಸರು ಕುಡಿಕೆ ಉತ್ಸವ 2023" ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget