ಕರಾವಳಿಸುಳ್ಯ

ಸುಳ್ಯ:ದಿ.ಡಾ|ಕುರುಂಜಿ ವೆಂಕಟ್ರಮಣ ಗೌಡರ  95ನೇ ವರ್ಷದ ಜನ್ಮದಿನಾಚರಣೆ: ಕೆವಿಜಿಯವರ ಪುತ್ಥಳಿಗೆ ಮಾಲಾರ್ಪಣೆ

157

ನ್ಯೂಸ್ ನಾಟೌಟ್ :ಸುಳ್ಯವನ್ನು ಭಾರತದ ಭೂಪಟದಲ್ಲಿ ಗುರುತಿಸಿವಂತೆ ಮಾಡಿದ, ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ 95ನೇ ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ ಪುಷ್ಪನಮನ ಕಾರ್ಯಕ್ರಮವು ಇಂದು (ಡಿ.26ರಂದು) ನಡೆಯಿತು.

ಕುರುಂಜಿಭಾಗ್‌ನಲ್ಲಿರುವ ಅವರ ಕಂಚಿನ ಪುತ್ಥಳಿಗೆ ಕುರುಂಜಿಯವರ ಹಿರಿಯ ಪುತ್ರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಅಧ್ಯಕ್ಷ ಡಾ. ಕೆ. ವಿ. ಚಿದಾನಂದರವರು ಮಾಲಾರ್ಪಣೆ ಮಾಡಿ, ಕುರುಂಜಿಯವರ ಆದರ್ಶ ತತ್ವಗಳು, ಮೇಲ್ದರ್ಜೆಗೇರಿದ ಸುಳ್ಯ ಸಂಸ್ಥೆಗಳು ಇಂದು ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ತಂದೆಯವರು ಮಾಡಿದ ಸಾಧನೆ ಮತ್ತು ಅನುಭವಿಸಿದ ಕಷ್ಟಗಳ ಬಗ್ಗೆ ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಉಪಾಧ್ಯಕ್ಷರಾದ ಶ್ರೀಮತಿ. ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ.ಸಿ., ಹಾಗೂ ಶ್ರೀ. ಕೆ. ವಿ. ಹೇಮನಾಥ, ಖಜಾಂಜಿ ಡಾ. ಗೌತಮ್ ಗೌಡ, ಕೌನ್ಸಿಲ್ ಮೆಂಬರ್ ಶ್ರೀ. ಜಗದೀಶ್ ಅಡ್ತಲೆ ಮತ್ತು ಧನಂಜಯ ಮದುವೆಗದ್ದೆ ಉಪಸ್ಥಿತರಿದ್ದರು.

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀ. ಚಂದ್ರಶೇಖರ್ ಪೇರಾಲು ಮಾತನಾಡಿ ‘ಕುರುಂಜಿಯವರ ಅಂದಿನ ಜೀವನ ಶೈಲಿ ಹಾಗೂ ಅವರ ಆದರ್ಶಗಳ ಬಗ್ಗೆ ತಿಳಿಸಿದರು. ಸುಳ್ಯ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಸುಳ್ಯದ ಅಭಿವೃದ್ಧಿಯ ಬಗೆಗಿನ ಅವರ ಚಿಂತನೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ ರೈ, ಡಾ. ಜ್ಞಾನೇಶ್ ನಿಡ್ಯಮಲೆ, ಚಂದ್ರ ಕೋಲ್ಚಾರ್, ಅಗ್ರೋ ರಾಮಚಂದ್ರ, ಸ್ವಾಗತ್ ಪ್ರಭಾಕರನ್ ನಾಯರ್, ಶಂಶುದ್ಧೀನ್ ಅರಂಬೂರು, ಶರತ್ ಅಡ್ಕಾರ್,ಶೈಲೇಶ್ ಅಂಬೆಕಲ್ಲು, ಮಧುವನ ಪ್ರಭಾಕರನ್ ನಾಯರ್, ಪ್ರೊ. ಬಾಲಚಂದ್ರ ಗೌಡ, ಗಿರೀಶ್ ನಾರ್ಕೋಡ್, ಎ. ಸಿ. ವಸಂತ, ಡಾ. ಕೆ. ಟಿ. ವಿಶ್ವನಾಥ, ಡಾ. ಪೂವಪ್ಪ ಕಣಿಯೂರು, ದೊಡ್ಡಣ್ಣ ಬರೆಮೇಲು, ಜನಾರ್ಧನ ನಾಯ್ಕ,ಪಿ. ಎ. ಮಹಮ್ಮದ್, ಸುಳ್ಯದ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ, ಹರೀಶ್ ಬಂಟ್ವಾಳ, ಸುಳ್ಯ ರೋಟರಿ ಅಧ್ಯಕ್ಷ ಆನಂದ ಖಂಡಿಗ ಹಾಗೂ ಪದಾಧಿಕಾರಿಗಳು, ಸುಳ್ಯ ಲಯನ್ಸ್ ಪದಾಧಿಕಾರಿಗಳು, ಜೇಸಿಐ ಸುಳ್ಯ ಪಯಸ್ವಿನಿಯ ಪದಾಧಿಕಾರಿಗಳು ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಲ್ಲದೇ ಕೆವಿಜಿಯವರ ಅಭಿಮಾನಿಗಳು ಉಪಸ್ಥಿತರಿದ್ದರು.

ಕೆವಿಜಿ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿವರ್ಗದವರು, ಸ್ನಾತಕೋತರ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೆವಿಜಿ ಸ್ಥಾಪಕ ದಿನಾಚರಣೆಯ ಕಾರ್ಯದರ್ಶಿ ಡಾ. ಲೀಲಾಧರ್ ಡಿ. ವಿ. ಸ್ವಾಗತಿಸಿ, ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ವಂದಿಸಿದರು. ನೆಹರೂ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕಿ ಕು. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget