Latest

ಸುಳ್ಯ:ವಿವಾಹ ನಿಶ್ಚಯ ಮಾಡಿಕೊಂಡಿದ್ದ ಯುವಕ ನಾಪತ್ತೆ!ಮಂಗಳೂರಿಗೆ ಹೋಗುವುದಾಗಿ ತಿಳಿಸಿದ್ದ ಯುವಕನ ಫೋನ್ ಸ್ವಿಚ್ ಆಫ್

1.5k

ನ್ಯೂಸ್‌ ನಾಟೌಟ್: ವಿವಾಹ ನಿಶ್ಚಯ ಮಾಡಿಕೊಂಡಿದ್ದ  ಯುವಕನೋರ್ವ ದಿಢೀರ್ ಕಾಣೆಯಾಗಿದ್ದು ಈ ಘಟನೆ ಬಗ್ಗೆ ಸುಳ್ಯ ಬಾಳಿಲದಿಂದ ವರದಿಯಾಗಿದೆ. ದೇರಂಪಾಲು ಆರ್.ಸಿ.ಮನೆ ಶೀನಪ್ಪ ರೈಯವರ ಪುತ್ರ ಹರೀಶ್ ರೈ ಎಂಬವರು ಕಾಣೆಯಾಗಿದ ಯುವಕ ಎನ್ನಲಾಗಿದೆ. ಈ ಬಗ್ಗೆ ಅಣ್ಣ ವೆಂಕಪ್ಪ ರೈ ದೇರಂಪಾಲು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?

‘ತಮ್ಮ ಹರೀಶ್‌ ರೈ ಡಿ. (38) ಸುಮಾರು 13 ವರ್ಷಗಳಿಂದ ಪುತ್ತೂರಿನಲ್ಲಿರುವ ಮಹೀಂದ್ರಾ ಫೈನಾನ್ಸ್ ಇಲ್ಲಿ ಸೀನಿಯರ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡಿಕೊಂಡಿದ್ದ.ಅವರಿಗೆ ದೂರದ ಸಂಬಂಧಿಕರ ಯುವತಿ ಜೊತೆ ವಿವಾಹ ನಿಶ್ಚಯವೂ ಆಗಿತ್ತು.ಮಾ.20 ರಂದು ಬೆಳಿಗ್ಗೆ 7:30ಕ್ಕೆ ಯುವತಿಯ ಮನೆಗೆ ಹೋಗಿ ಬಳಿಕ ಕೆಲಸಕ್ಕೆ ಹೋಗುವುದಾಗಿ ನನ್ನಲ್ಲಿ ತಿಳಿಸಿ ಮನೆಯಿಂದ ತೆರಳಿದ್ದಾನೆ.ವಾಪಸ್‌ ಸಂಜೆ 5:00 ಗಂಟೆಗೆ ಮನೆಗೆ ಬರಬೇಕಾದವರು ಸಂಜೆ 6:00 ಗಂಟೆಯಾದರೂ ಬಾರದೇ ಇದ್ದಾಗ ಯುವತಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದೇನೆ.

ಈ ವೇಳೆ ನನ್ನ ತಮ್ಮನಾದ ಹರೀಶನು ತಾನು ಮದುವೆಯಾಗಲಿರುವ ಯುವತಿಯ ಮನೆಗೆ ಬೆಳಿಗ್ಗೆ 8:00 ಗಂಟೆಗೆ ಹೋಗಿ ಆಕೆಯನ್ನು ತನ್ನ ಬೈಕ್ ನಲ್ಲಿ ಪುತ್ತೂರಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆ ವಿಟ್ಲಕ್ಕೆ ಹೋಗುವವಳಿದ್ದಳು. ಹೀಗಾಗಿ ಪುತ್ತೂರು ಬಸ್‌ ನಿಲ್ದಾಣದಲ್ಲಿ ಇಳಿಸಿ ತಾನು ಚಿನ್ನಾಭರಣ ಖರೀದಿ ಬಗ್ಗೆ ಮಂಗಳೂರಿಗೆ ಹೋಗುವುದಾಗಿ ತಿಳಿಸಿದ್ದು, ಬಳಿಕ ಆಕೆಯು 12:00 ಗಂಟೆ ಬಳಿಕ ಹರೀಶ್‌ ನಿಗೆ ಕಾಲ್‌ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿತ್ತು ಎಂದು ಆಕೆ ತಿಳಿಸಿದ್ದಾಳೆ. ಬಳಿಕ ನಾನು ಮಂಗಳೂರಿನಲ್ಲಿರುವ ನನ್ನ ಅಣ್ಣಂದಿರಿಗೆ, ಹರೀಶನ ಸಹೋದ್ಯೋಗಿಗಳಿಗೆ ಫೋನ್ ಮಾಡಿ ವಿಚಾರಿಸಿದಾಗ ಹರೀಶನ ಬಗ್ಗೆ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಆದರಿಂದ ಕಾಣೆಯಾಗಿರುವ ಹರೀಶ್‌ ರೈ ಯವರನ್ನು ಕೂಡಲೇ ಪತ್ತೆ ಹಚ್ಚಿ ಕೊಡಬೇಕು ಎಂದು ಅಣ್ಣ ವೆಂಕಪ್ಪ ರೈ ಯವರು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

See also  ರಾಜಧಾನಿ ಬೆಂಗಳೂರಿನಲ್ಲಿ ಬುಸ್ ಬುಸ್ ನಾಗಪ್ಪ..!ಮನೆಯೊಳಗೆ ಕಾಣಿಸಿಕೊಂಡ ಹಾವುಗಳನ್ನು ಕಂಡು ಭಯಭೀತರಾದ ಜನ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget