ಕರಾವಳಿಕೊಡಗುಸುಳ್ಯ

ಸುಳ್ಯ:ಕಳೆದ ಒಂದು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ನಿಧನ,ಕಣ್ಣೀರಲ್ಲಿ ಕುಟುಂಬ..

ನ್ಯೂಸ್ ನಾಟೌಟ್ :ಕಳೆದ ಒಂದು ವರ್ಷಗಳ ಹಿಂದೆ ಗೋಡೆಗೆ ಕಲ್ಲು ಕಟ್ಟುತ್ತಿದ್ದಾಗ ಮೇಲಿಂದ ಕೆಳಕ್ಕೆ ಬಿದ್ದು ವಿಪರೀತ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಜಯನಗರ(48) ಇಂದು ನಿಧನರಾಗಿದ್ದಾರೆ.

ಅವರು ಕಳೆದ ಒಂದು ವರ್ಷಗಳ ಹಿಂದೆ ಗಾಯಗೊಂಡು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.ಮನೆಯೊಂದರ ಗೋಡೆಗೆ ಕಲ್ಲು ಕಟ್ಟುತ್ತಿದ್ದಾಗ ಮೇಲಿನಿಂದ ಕೆಳಕ್ಕೆ ಬಿದ್ದ ಪರಿಣಾಮ ಸೊಂಟದ ಮೂಳೆ ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ನಡೆಯಲೂ ಸಾಧ್ಯವಾಗದ ಹಿನ್ನಲೆ ಇವರ ಕುಟುಂಬದ ನಿರ್ವಹಣೆಯೇ ಕಷ್ಟ ಸಾಧ್ಯವಾಗಿತ್ತು.ಆಸ್ಪತ್ರೆಯಲ್ಲಿದ್ದ ರವಿ ಅವರನ್ನು ಪತ್ನಿ ಹಗಲೆಲ್ಲ ಆರೈಕೆ ಮಾಡಿ ರಾತ್ರಿ ಹೊಟೇಲ್ ಗೆ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದರು.ಇವರಿಗೆ ಒಂದು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳಿದ್ದು,ಜೀವನ ಸಾಗಿಸುವುದೇ ಕಷ್ಟವಾಗಿದೆ.

ರವಿ ಜಯನಗರ ಅವರ ಚಿಕಿತ್ಸೆಗೆ ಹಾಗೂ ಜೀವನ ನಿರ್ವಹಣೆಗೆ ಹಲವು ಮಂದಿ ಸಹಕಾರ ನೀಡಿದ್ದರು.ಅವರು ಮೊದಲಿನಂತಾಗಲೆಂದು ಹಾರೈಸಿದ್ದರು.ಆದರೆ ಇವರ ನಿಧನದ ವಾರ್ತೆ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related posts

ಅಕ್ರಮ ಗೋಮಾಂಸ ಸಾಗಾಟ ವಾಹನ ತಡೆದು ಪ್ರತಿಭಟನೆ! ವಾಹನಕ್ಕೆ ಬೆಂಕಿ ಇಟ್ಟದ್ದೇಕೆ ಶ್ರೀರಾಮ ಸೇನೆ?

ನನ್ನ ಸಾಧನೆ ಹಿಂದಿರುವುದು ಕುಟುಂಬ- ರಮಿತಾ ಶೈಲೇಂದ್ರ ಹೆಮ್ಮೆಯ ನುಡಿ

ಸುಳ್ಯ: ಚಲಿಸುತ್ತಿದ್ದ ಪಿಕಪ್ ಗೆ ನಿಯಂತ್ರಣ ತಪ್ಪಿ ಗುದ್ದಿದ ಸ್ಕೂಟಿ ಸವಾರ, ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲು