Latestಕೆವಿಜಿ ಕ್ಯಾಂಪಸ್‌ಸುಳ್ಯ

ಸುಳ್ಯ:ಜ.26 ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಸಿದ ಎನ್‌ಸಿಸಿ ಕೆಡೆಟ್ ಗಳಿಗೆ ಅದ್ದೂರಿ ಸ್ವಾಗತ ,ರಸ್ತೆಯುದ್ದಕ್ಕೂ ಮೆರವಣಿಗೆಯೊಂದಿಗೆ ವೆಲ್ ಕಮ್‌ ಮಾಡಿದ ನೆಹರೂ ಮೆಮೋರಿಯಲ್ ಕಾಲೇಜು:ಎಓಎಲ್ಇ(ರಿ.) ಅಧ್ಯಕ್ಷ ಡಾ.ಕೆ.ವಿ. ಚಿದಾನಂದರು ಸೇರಿದಂತೆ ಹಲವಾರು ಗಣ್ಯರು ಭಾಗಿ

778

ನ್ಯೂಸ್ ನಾಟೌಟ್: 2025 ಜನವರಿ 26 ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ಗೆ ಸುಳ್ಯದ ಪ್ರತಿಷ್ಟಿತ ನೆಹರೂ ಮೆಮೋರಿಯಲ್ ಕಾಲೇಜಿನ ಮೂವರು NCC ಕೆಡೆಟ್ ಗಳು ಹಾಗೂ ವಿಶೇಷ ಅತಿಥಿಯಾಗಿ ಎನ್ ಎಸ್ ಎಸ್ ನಾಯಕ ಆಯ್ಕೆಯಾಗಿದ್ದು ವಿಶೇಷ ಸಾಧನೆಯಾಗಿದೆ. ಈ ಹಿನ್ನೆಲೆಯಲ್ಲಿ ಫೆ.18ರಂದು ಕಾಲೇಜಿನ ವತಿಯಿಂದ ಅದ್ದೂರಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸುಳ್ಯದ ಜ್ಯೋತಿ ಸರ್ಕಲ್ ಬಳಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಅಕಾಡೆಮಿ ಅಫ್ ಲಿಬರಲ್ ಎಜ್ಯುಕೇಶನ್(ರಿ.) ಇದರ ಅಧ್ಯಕ್ಷ ಡಾ ಕೆ.ವಿ. ಚಿದಾನಂದ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿದರು.

ಈ ಸಂಧರ್ಭ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಪ್ರೊ. ಡಾ ಲೀಲಾಧರ್ ಡಿ.ವಿ. ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಕುಮಾರ್ ಎಮ್.ಎಮ್, ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಿಥಾಲಿ ಪಿ.ರೈ, ಎನ್.ಸಿ.ಸಿ ಅಧಿಕಾರಿಗಳು ದೈಹಿಕ ಶಿಕ್ಷಣ ನಿರ್ದೇಶಕ ಲೆಫ್ಟಿನೆಂಟ್ ಸೀತಾರಾಮ್.ಎಂ.ಡಿ. ನಿವೃತ್ತ ಸೈನಿಕರ ಸಂಘದ ಕಾರ್ಯದರ್ಶಿ, ನಿವೃತ್ತ ಯೋಧ ಮೋಹನ್ ಅಡ್ಕಬಳೆ, ಕೃಷ್ಣಪ್ಪ ಕೆ,ನಗರ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಸ್ಥಳೀಯ ಸದಸ್ಯ ವಿನಯ್ ಕುಮಾರ್ ಕಂದಡ್ಕ ಹಾಗೂ ಸುಳ್ಯದ ಸಮಸ್ತ ನಾಗರಿಕರು, ವಿದ್ಯಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಮಾಜ ಸೇವಾ ಬಂಧುಗಳು ಉಪಸ್ಥಿತರಿದ್ದರು.

ಸ್ವಾಗತ ಕಾರ್ಯಕ್ರಮದ ಬಳಿಕ ನಗರ ಪಂಚಾಯತ್ ಆವರಣದಲ್ಲಿರುವ ಸೈನಿಕರ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಲಾಯಿತು.ನಂತರ ಸಾಧಕ ವಿದ್ಯಾರ್ಥಿಗಳನ್ನು ಅದ್ದೂರಿ ಮೆರವಣಿಗೆಯೊಂದಿಗೆ ಜ್ಯೋತಿ ಸರ್ಕಲ್ ನಿಂದ ಸುಳ್ಯ ಮುಖ್ಯ ರಸ್ತೆಯತ್ತ ಸಾಗಿ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕರೆತರಲಾಯಿತು. ಬಳಿಕ ಕಾಲೇಜಿನ ಕೆವಿಜಿ ಷಠ್ಯಬ್ಧ ರಂಗಮಂದಿರ ವೇದಿಕೆಯಲ್ಲಿ ಅಂತಿಮ ಬಿ.ಎ ವಿಭಾಗದ ಸಿ.ಎಸ್.ಯು.ಒ(CSUO) ಚೇತನ್,ಅಂತಿಮ ಬಿ.ಕಾಂ ನ ಸಿ.ಯು.ಒ(CUO) ಕೃಷ್ಣ ಕೆ.ಎಲ್‌.

‘ದ್ವಿತೀಯ ಬಿ.ಸಿ.ಎ’ಯ ಎಸ್‌.ಜಿ.ಟಿ (SGT)ಚಲನಾ, ಎನ್ ಎಸ್ ಎಸ್ ನಾಯಕ ತೃತೀಯ ಬಿ.ಕಾಂ ನ ಹರ್ಷಿತ್ ಕೆ ಎಲ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

See also  ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಕಾರ್ಯಕ್ರಮ,ಸಿಎಂ ಸಿದ್ದರಾಮಯ್ಯ ಭಾಷಣ ;ಬಿಜೆಪಿ ಕಾರ್ಯಕರ್ತೆಯರಿಂದ ಪ್ರತಿಭಟನೆ: ಸಿದ್ದರಾಮಯ್ಯ ಗೋ ಬ್ಯಾಕ್ ಪಾಕಿಸ್ತಾನ್ ಎಂಬ ಘೋಷಣೆ;ಸಿಎಂ ಕೆಂಡಾಮಂಡಲ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget